Advertisement

ಸೀಟ್‌ ಬೆಲ್ಟ್ ಧರಿಸದೆ ಪ್ರಯಾಣಿಸಿದ್ದ ಸೈರಸ್‌; ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢ

09:32 PM Sep 05, 2022 | Team Udayavani |

ಮುಂಬೈ:ರಸ್ತೆ ಅಪಘಾತದಲ್ಲಿ ಭಾನುವಾರ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ಕಾರಿನ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಜಹಾಂಗೀರ್‌ ಪಂಡೋಲೆ ಸೀಟ್‌ ಬೆಲ್ಟ್ ಧರಿಸಿರಲಿಲ್ಲ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಈ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್‌ ಬೆನ್‌j ಜಿಎಲ್‌ಸಿ 220ಡಿ 4ಮೆಟಕ್‌ ಮಾಡೆಲ್‌ ಕಾರಿಗೆ ಹಿಂದಿನ ಸೀಟಿನಲ್ಲಿ ಏರ್‌ ಬ್ಯಾಗ್‌ ಸೌಲಭ್ಯ ಇರಲಿಲ್ಲ ಎಂದು ಕೆಲವು ಇಂಗ್ಲಿಷ್‌ ಪತ್ರಿಕೆಗಳು ವರದಿ ಮಾಡಿವೆ.

Advertisement

ಮುಂಬೈನ ಜನಪ್ರಿಯ ಸ್ತ್ರೀರೋಗ ತಜ್ಞೆ ಅನಹಿತ ಪಂಡೋಲ್‌ ಈ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಜತೆಗೆ ಚಕೋಟಿ ಚೆಕ್‌ಪೋಸ್ಟ್‌ನಿಂದ ಅಪಘಾತ ನಡೆದ ಸ್ಥಳಕ್ಕೆ ಇರುವ 20 ಕಿಮೀ ದೂರವನ್ನು 9 ನಿಮಿಷಗಳಲ್ಲಿ ಕ್ರಮಿಸಿದ್ದ ಅಂಶವೂ ತನಿಖೆಯಿಂದ ಗೊತ್ತಾಗಿದೆ. ಅಪಘಾತಕ್ಕೆ ವೇಗವಾಗಿ ವಾಹನ ಚಲಾಯಿಸಿದ್ದೇ ಕಾರಣ ಎಂದೂ ಅವರು ಹೇಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪ್ರತ್ಯದರ್ಶಿ ” ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಮಹಿಳೆ ಕಾರು ಚಲಾಯಿಸುತ್ತಿದ್ದರು ಎಂದು ಗೊತ್ತಾಯಿತು. ಘಟನೆ ನಡೆದ ಕೂಡಲೇ ಕಾರಿನ ಸಮೀಪ ಧಾವಿಸಿದೆವು. ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರ ಉಸಿರು ಆದಾಗಲೇ ನಿಂತಿತ್ತು. ಅವರು ಸೀಟ್‌ ಬೆಲ್ಟ್ ಧರಿಸಿರಲಿಲ್ಲ,’ ಎಂದರು.

“ಕಾರಿನ ಮುಂಭಾಗದಲ್ಲಿ ಕುಳಿತ್ತಿದ್ದ ಇಬ್ಬರು ಉಸಿರಾಡುತ್ತಿದ್ದರು. ಅವರಿಬ್ಬರು ಸೀಟ್‌ ಬೆಲ್ಟ್ ಧರಿಸಿದ್ದರು. ಅಲ್ಲದೇ ಏರ್‌ ಬ್ಯಾಗ್‌ ಕೂಡ ತೆರೆದಿತ್ತು’ ಎಂದು ವಿವರಿಸಿದರು.

ಇಂದು ಅಂತ್ಯಕ್ರಿಯೆ:
ಅಪಘಾತದಲ್ಲಿ ಮಡಿದ ಸೈರಸ್‌ ಮಿಸ್ತ್ರಿ ಅವರ ಅಂತ್ಯಕ್ರಿಯೆಯು ಮುಂಬೈನ ವರ್ಲಿ ಸ್ಮಶಾನದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Advertisement

ಸೀಟ್‌ ಬೆಲ್ಟ್ ಧರಿಸಿ ಪ್ರಯಾಣಿಸಿ
ಸೈರಸ್‌ ಮಿಸ್ತ್ರಿ ಅವರ ಅಪಘಾತದ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ “ಸೀಟ್‌ ಬೆಲ್ಟ್ ಧರಿಸಿ ಪ್ರಯಾಣಿಸಿ’ ಎಂಬ ಪ್ರಚಾರ ಶುರುವಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಉದ್ಯಮಿ ಆನಂದ್‌ ಮಹೀಂದ್ರಾ, “ನಾನು ಕಾರಿನ ಹಿಂಬದಿ ಸೀಟ್‌ನಲ್ಲಿ ಪ್ರಯಾಣಿಸುತ್ತಿರುವಾಗಲೂ ಸದಾ ಸೀಟ್‌ ಬೆಲ್ಟ್ ಧರಿಸುತ್ತೇನೆ. ಎಲ್ಲರೂ ದಯವಿಟ್ಟು ಸೀಲ್ಟ್ ಬೆಲ್ಟ್ ಧರಿಸುವ ಪ್ರತಿಜ್ಞೆ ಮಾಡಿ. ನಮ್ಮೆಲ್ಲರಿಗೂ ಕುಟುಂಬಗಳಿದ್ದು, ಅವರು ನಮ್ಮ ನಿರೀಕ್ಷೆಯಲ್ಲಿರುತ್ತಾರೆ,’ ಎಂದು ಟ್ವೀಟ್‌ ಮಾಡಿದ್ದಾರೆ. ಅವರ ಟ್ವೀಟ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next