Advertisement

ಇಂದು ಗುಜರಾತ್ ಗೆ ಅಪ್ಪಳಿಸಲಿದೆ ತೌಕ್ತೇ ಚಂಡಮಾರುತ, ಮುಂಬಯಿ ವಿಮಾನ ನಿಲ್ದಾಣ ಬಂದ್

11:49 AM May 17, 2021 | Team Udayavani |

ನವದೆಹಲಿ: ಗುಜರಾತ್ ನ ಭಾವ್ ನಗರ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ತೌಕ್ತೇ ಚಂಡಮಾರುತ ರಾತ್ರಿ 8ರಿಂದ 11ಗಂಟೆವರೆಗೆ ತೀವ್ರವಾಗಿ ಅಪ್ಪಳಿಸಲಿದ್ದು, ತೌಕ್ತೇ ಚಂಡಮಾರುತದ ಗಾಳಿ ಗಂಟೆಗೆ 165 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಬೆಳಗ್ಗೆ 8.30ಕ್ಕೆ ಚಂಡಮಾರುತ ಮುಂಬೈನಿಂದ 150 ಕಿ.ಮೀಟರ್ ದೂರದಲ್ಲಿದ್ದು, ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿ ವಿವರಿಸಿದೆ.

Advertisement

ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೋರಬಂದರ್ ಮತ್ತು ಭಾವ್ ನಗರದ ಮಹುವಾ ತಗ್ಗುಪ್ರದೇಶದಲ್ಲಿರುವ ಸುಮಾರು 25 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ ಸುಮಾರ 1.5 ಲಕ್ಷ ಮಂದಿಯನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

ತೌಕ್ತೇ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗಲಿದ್ದು, ಗಂಟೆಗೆ 190 ಕಿ.ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದ್ದು, ಜುನಾಗಢ್, ಗಿರ್ ಸೋಮ್ ನಾಥ್ ಮತ್ತು ಅಮ್ರೇಲಿ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಮುಂಬಯಿನಲ್ಲಿ ವಿಮಾನ ನಿಲ್ದಾಣ ಬಂದ್:
ಸೋಮವಾರ ಬೆಳಗ್ಗೆ ಮುಂಬಯಿನಲ್ಲಿ ಸಾಧಾರಣ ಮಳೆಯಾಗಿದ್ದು, ವಿಮಾನ ನಿಲ್ದಾಣವನ್ನು 2ಗಂಟೆವರೆಗೆ ಬಂದ್ ಮಾಡಲಾಗಿದೆ. ಅಲ್ಲದೇ ಬಾಂದ್ರಾ-ವರ್ಲಿ ಸಂಪರ್ಕ ಸೇತುವೆಯನ್ನು ಬಂದ್ ಮಾಡಲಾಗಿದೆ. ನಗರದ 24 ವಾರ್ಡ್ ಗಳಲ್ಲಿ ಐದು ತಾತ್ಕಾಲಿಕ ಶೆಲ್ಟರ್ ನಿರ್ಮಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಎನ್ ಡಿಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ.

ಥಾಣೆ, ರಾಯ್ ಗಢ್, ಪಾಲ್ ಘಡ್, ರತ್ನಗಿರಿ ಜಿಲ್ಲೆಗಳಲಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next