Advertisement

ನಿವಾರ್ ಚಂಡಮಾರುತ ಭೀತಿ: ತಮಿಳುನಾಡಿನಲ್ಲಿ ಹೈಅಲರ್ಟ್, ಕರ್ನಾಟಕದಲ್ಲೂ ಮಳೆ ಸಾಧ್ಯತೆ

04:30 PM Nov 24, 2020 | Nagendra Trasi |

ಚೆನ್ನೈ: ಪ್ರಬಲ ನಿವಾರ್ ಚಂಡಮಾರುತ ಬುಧವಾರ(ನವೆಂಬರ್ 25, 2020) ತಮಿಳುನಾಡಿನ ಕಾರೈಕಲ್ ಮತ್ತು ಮಹಾಬಲಿಪುರಂ ಕರಾವಳಿ ಪ್ರದೇಶದಿಂದ ಹಾದು ಹೋಗುವ ನಿರೀಕ್ಷೆ ಇದ್ದಿರುವುದಾಗಿ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

Advertisement

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಮಳೆಯಾಗುವ ಸಾಧ್ಯತೆ ಇದ್ದು, ತಮಿಳುನಾಡಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ವರದಿ ಹೇಳಿದೆ.

ಬಂಗಾಳಕೊಲ್ಲಿ ಪ್ರದೇಶದಲ್ಲಿ ಸೋಮವಾರ ತೀವ್ರ ವಾಯುಭಾರ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಭಾರೀ ಏರುಪೇರಾಗುವ ಸಾಧ್ಯತೆ ಇದ್ದು, ಮುಂದಿನ 12 ಗಂಟೆಯೊಳಗೆ ಚಂಡಮಾರುತ ಬಡಿದಪ್ಪಳಿಸಲಿದೆ ಎಂದು ತಿಳಿಸಿದೆ.

ಮುಂಜಾಗ್ರತಾ ಕ್ರಮವಾಗಿ ಒಟ್ಟು 30 ಎನ್ ಡಿಆರ್ ಎಫ್ ತಂಡವನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಐಎಂಡಿಯ ಹೊಸ ಪ್ರಕಟಣೆಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ತೀವ್ರವಾದ ವಾಯುಭಾರ ಕುಸಿತ ಸಂಭವಿಸಿದ ನಿಟ್ಟಿನಲ್ಲಿ ಪಾಂಡಿಚೇರಿಯ ಪೂರ್ವ, ಆಗ್ನೇಯ ಪಾಂಡಿಚೇರಿಯಿಂದ 450 ಕಿಲೋ ಮೀಟರ್ ಹಾಗೂ ಚೆನ್ನೈನಿಂದ 480 ಕಿಲೋ ಮೀಟರ್ ದೂರದಲ್ಲಿರುವ ಬಂಗಾಳ ಕೊಲ್ಲಿಯ ಮಧ್ಯೆ ಚಂಡಮಾರುತದ ಕೇಂದ್ರವಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next