Advertisement

Fraud: ಅಮರನಾಥ ಯಾತ್ರೆಗೆ ಕರೆದೊಯ್ಯುವುದಾಗಿ ಮಹಿಳೆಗೆ 1.27 ಲಕ್ಷ ವಂಚಿಸಿದ ಸೈಬರ್‌ ಕಳ್ಳರು

10:48 AM Sep 09, 2023 | Team Udayavani |

ಬೆಂಗಳೂರು: ಅಮರನಾಥ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಆನ್‌ಲೈನ್‌ನಲ್ಲಿ ಮಹಿಳೆಯಿಂದ 1.27 ಲಕ್ಷ ರೂ. ಪಡೆದ ಸೈಬರ್‌ ಕಳ್ಳರು ವಂಚಿಸಿದ್ದಾರೆ.

Advertisement

ಉಲ್ಲಾಳುವಿನ ಮಮತಾ (44) ವಂಚನೆಗೊಳಗಾದವರು.

ಮಮತಾ ಅಮರನಾಥ ಯಾತ್ರೆಗೆ ಪ್ರವಾಸ ಹೋಗಲು ಆನ್‌ ಲೈನ್‌ನಲ್ಲಿ ಟ್ರಾವೆಲ್‌ ಏಜೆನ್ಸಿ ಹುಡುಕುತ್ತಿದ್ದರು. ಆ ವೇಳೆ ಫೇಸ್‌ಬುಕ್‌ನಲ್ಲಿ ಕಂಡು ಬಂದ ಜಾಹೀರಾತು ಒಂದರಲ್ಲಿ ಅಮರನಾಥ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹಾಕಿರುವುದನ್ನು ಗಮನಿಸಿದ್ದರು. ನಂತರ ಸಂಬಂಧಿಸಿದ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಪರಿಶೀಲಿಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಇವರಿಗೆ ಕರೆ ಮಾಡಿದ ಅಪರಿಚಿತರು, ಪ್ರವಾಸಕ್ಕೆ ತೆರಳಲು ಬುಕ್‌ ಮಾಡುವುದಾಗಿ ಹೇಳಿ ಹಂತವಾಗಿ 1.27 ಲಕ್ಷ ರೂ. ಅನ್ನು ಆನ್‌ಲೈನ್‌ನಲ್ಲಿ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next