Advertisement

ಕೋವಿಡ್‌ ಹೆಸರಿನಲ್ಲಿ ಸೈಬರ್‌ ವಂಚನೆ: ಪೊಲೀಸರಿಂದ ಕಟ್ಟೆಚ್ಚರ

10:48 AM Jun 01, 2021 | Team Udayavani |

ಮುಂಬಯಿ: ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಸೈಬರ್‌ ವಂಚಕರು ಜನರನ್ನು ಮೋಸಗೊಳಿಸುವ ಸಾಧನ ವಾಗಿ ಕೋವಿಡ್‌ ಅನ್ನು ಬಳಸುತ್ತಿದ್ದಾರೆ ಎಂದು ನಗರ ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಂಚ ಕರು ಆಕ್ಸಿಜನ್‌ ಸಿಲಿಂಡರ್‌ ಒದಗಿಸಲು, ಆ್ಯಂಟಿ ವೈರಲ್‌ ಔಷಧಗಳನ್ನು ಒದಗಿಸುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದು, ಕೋವಿಡ್‌ ಲಸಿಕೆಯ ಮುಂಚೂಣಿಯಲ್ಲಿರುವ ವಿದೇಶಿ ಕಂಪೆನಿಗಳ ಹೆಸರನ್ನು ಬಳಸಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ನಗರ ಪೊಲೀಸರಿಂದ ಸಂಗ್ರಹಿಸಿದ ಅಂಕಿಅಂಶ ಬಹಿರಂಗಪಡಿಸಿದೆ.

Advertisement

ಅಂಕಿಅಂಶಗಳ ಪ್ರಕಾರ ಎ. 30ರ ವರೆಗೆ ಮುಂಬಯಿ ಪೊಲೀಸರು ನಗರದಾದ್ಯಂತ 777 ಸೈಬರ್‌ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, ರಾಜ್ಯ ಸೈಬರ್‌ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಆನ್‌ಲೈನ್‌ ಹಣಕಾಸು ವಹಿವಾಟು ಮಾಡುವಾಗ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಮೊದಲ ನಾಲ್ಕು ತಿಂಗಳಲ್ಲಿ ದಾಖಲಾದ ಹೆಚ್ಚಿನ ಪ್ರಕರಣಗಳು ಕ್ರೆಡಿಟ್‌ ಕಾರ್ಡ್‌ ಮತ್ತು ಆನ್‌ಲೈನ್‌ ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಇಂತಹ 181 ಅಪರಾಧಗಳು ದಾಖಲಾಗಿವೆ. 78 ಪ್ರಕರಣಗಳು ಅಶ್ಲೀಲ ಎಸ್‌ಎಂಎಸ್‌ ಮತ್ತು ಇ-ಮೇಲ್‌ ಪ್ರಕರಣಗಳಾಗಿವೆ. ಅಲ್ಲದೆ ಮಾರ್ಫಿಂಗ್‌ ಇ-ಮೇಲ್‌ಗ‌ಳು ಮತ್ತು ನಕಲಿ ಸೋಶಿಯಲ್‌ ಮೀಡಿಯಾ ಪ್ರೊಫೈಲಿಂಗ್‌ನ 18 ಪ್ರಕರಣಗಳು, ಫಿಶಿಂಗ್‌ನ ನಾಲ್ಕು ಪ್ರಕರಣಗಳು, ಮೂಲ ಕೋಡ್‌ ಅನ್ನು ಹಾಳು ಮಾಡಿದ ಎರಡು ಪ್ರಕರಣಗಳು ಹಾಗೂ ಇತರ ವಿಭಾಗಗಳಲ್ಲಿ  ಬರುವ 493 ಅಪರಾಧಗಳನ್ನು ಎಪ್ರಿಲ್‌ ಅಂತ್ಯದವರೆಗೆ ದಾಖಲಿಸಲಾಗಿದೆ.

1.58 ಲಕ್ಷ ರೂ. ಕಳೆದುಕೊಂಡ ಯುವಕ :

ಇತ್ತೀಚೆಗೆ ಚೆಂಬೂರಿನ 18 ವರ್ಷದ ಯುವಕನೋರ್ವ ಆನ್‌ಲೈನ್‌ನಲ್ಲಿ ಆಕ್ಸಿಜನ್‌ ಪೂರೈಕೆಗೆ ಆದೇಶಿಸುವಾಗ 1.58 ಲಕ್ಷ ರೂ. ಗಳನ್ನು ಕಳೆದುಕೊಂಡಿರುವ ಪ್ರಕರಣ ದಾಖಲಾಗಿದೆ. ಯುವಕ ತನ್ನ ಅನಾರೋಗ್ಯದ ಅಜ್ಜಿಗಾಗಿ ಆಮ್ಲಜನಕ ವ್ಯವಸ್ಥೆ ಮಾಡಲು ಆನ್‌ಲೈನ್‌ನಲ್ಲಿ ವಿತರಕನನ್ನು ಸಂಪರ್ಕಿಸಿದ್ದ. ವಿತರಕರು ಎರಡು ದಿನಗಳಲ್ಲಿ ವಿತರಣೆ ಮಾಡುವ ಭರವಸೆ ನೀಡಿದ್ದು, ಆರೋಪಿ ಸಂಪೂರ್ಣ ಪಾವತಿ ಮುಂಗಡವನ್ನು ಸ್ವೀಕರಿಸಿದರೂ ಆಮ್ಲಜನಕ ಸಿಲಿಂಡರ್‌ ತಲುಪಿಸಲಿಲ್ಲ. ಆರೋಪಿ ನೀಡಿದ ಜಿಎಸ್‌ಟಿ ಸಂಖ್ಯೆಯನ್ನು ಪರೀಕ್ಷಿಸಿದಾಗ ಅದು ಉಡುಪಿನ ಅಂಗಡಿಯದ್ದಾಗಿದೆ ಎಂದು ತಿಳಿದುಬಂದಿದೆ.

ಉದ್ಯಮಿಗೆ 1.7 ಕೋಟಿ ರೂ. ವಂಚನೆ :

Advertisement

ಒಂದೆರಡು ದಿನಗಳ ಹಿಂದೆ ದಕ್ಷಿಣ ಮುಂಬಯಿಯ ಉದ್ಯಮಿಯೊಬ್ಬರು 1.7 ಕೋಟಿ ರೂ. ಗಳ ವಂಚನೆಗೊಳಗಾಗಿದ್ದರು. ವಂಚಕರು ಕೋವಿಡ್‌ ಲಸಿಕೆಗಾಗಿ ಸುದ್ದಿಯಲ್ಲಿರುವ ಅಂತಾರಾಷ್ಟ್ರೀಯ ಔಷಧ ಕಂ±ಪೆನಿಯೊಂದರ ಖರೀದಿ ವ್ಯವಸ್ಥಾಪಕನೆಂದು ಹೇಳಿ ಕ್ಯಾನ್ಸರ್‌ ಔಷಧಕ್ಕಾಗಿ ಕಚ್ಚಾ ವಸ್ತುಗಳ ಮೇಲೆ ಹೂಡಿಕೆ ಮಾಡಲು ಉದ್ಯಮಿಗಳಿಗೆ ಆಮಿಷವೊಡ್ಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್‌ ಸಂಬಂಧಿತ ಔಷಧಗಳ ಕೊರತೆಯೊಂದಿಗೆ ರಾಜ್ಯಾದ್ಯಂತ ಹಲವಾರು ಮಂದಿ ಆನ್‌ಲೈನ್‌ ವಂಚನೆಗೊಳಗಾಗಿದ್ದು, ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸುವಂತೆ ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next