Advertisement

Ration Card ಸದ್ಯ ಯಾವುದೇ ಪಡಿತರ ಚೀಟಿ ರದ್ದಿಲ್ಲ: ಮುನಿಯಪ್ಪ

09:07 PM Aug 26, 2023 | Team Udayavani |

ಹಾಸನ: ರಾಜ್ಯದಲ್ಲಿ ಬಿಪಿಎಲ್‌, ಎಪಿಎಲ್‌ ಸಹಿತ ಯಾವುದೇ ಪಡಿತರ ಕಾರ್ಡ್‌ಗಳನ್ನು ಸದ್ಯಕ್ಕೆ ರದ್ದು ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 3 ಲಕ್ಷ ಕಾರ್ಡ್‌ ವಿತರಣೆಯ ಅರ್ಜಿಗಳು ಬಾಕಿ ಇವೆ. ಅವುಗಳ ವಿಲೇವಾರಿ ಮಾಡಿ ಬಿಪಿಎಲ್‌ ಕಾರ್ಡ್‌ ನೀಡಬೇಕಾ, ಎಪಿಎಲ್‌ ಕಾರ್ಡ್‌ ನೀಡಬೇಕಾ ಎಂದು ತಿಂಗಳೊಳಗೆ ಇತ್ಯರ್ಥ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ವೈಟ್‌ ಬೋರ್ಡ್‌ ನಂಬರಿನ ಕಾರು ಹೊಂದಿರುವವರಿಗೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ನಿರ್ಧಾರವನ್ನು ಇನ್ನೂ ಮಾಡಿಲ್ಲ. ನಮ್ಮ ಬಳಿ ಬಾಕಿ ಇರುವ ಕಾರ್ಡ್‌ಗಳ ಬೇಡಿಕೆಯನ್ನು ಮೊದಲು ವಿಲೇವಾರಿ ಮಾಡುತ್ತೇವೆ. ಬಳಿಕ ಹೊಸದರ ಬಗ್ಗೆ ಯೋಚಿಸುತ್ತೇವೆ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next