Advertisement

ಶನಿವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಕರ್ಫ್ಯೂ

04:58 AM May 23, 2020 | Lakshmi GovindaRaj |

ಬೆಂಗಳೂರು: ಲಾಕ್‌ಡೌನ್‌ 4.0 ಸಡಿಲಿಕೆ ಜತೆಗೆ ಮುಂದಿನ ಎರಡು ಭಾನುವಾರಗಳು ಸಂಪೂರ್ಣ ಲಾಕ್‌ಡೌನ್‌ ಆದೇಶ ಹಿನ್ನೆಲೆ ಯಲ್ಲಿ ಶನಿವಾರ (ಮೇ 23) ರಾತ್ರಿ ಏಳು ಗಂಟೆಯಿಂದ ಸೋಮವಾರ (ಮೇ 25) ಬೆಳಗ್ಗೆ ಏಳು ಗಂಟೆವರೆಗೆ  ನಗರ ದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ. ಶುಕ್ರವಾರ ಸಂಜೆ ತುರ್ತು ಸುದ್ದಿಗೋಷ್ಠಿ  ನಡೆಸಿದರು.

Advertisement

ಸಂಪೂರ್ಣ ಲಾಕ್‌ಡೌನ್‌ ಸಂದರ್ಭದಲ್ಲಿ ಜಾರಿಯಲ್ಲಿದ್ದಂತೆ ಅಗತ್ಯ  ಸೇವೆಗಳು ಹೊರತುಪಡಿಸಿ (ಆಸ್ಪತ್ರೆ, ಮೆಡಿ ಕಲ್‌, ದಿನಸಿ ಅಂಗಡಿ, ತರಕಾರಿ, ಮಾಂಸ ದಂಗಡಿ) ಬೇರೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಮತ್ತು ಇತರ ವಹಿವಾಟುಗಳು ನಡೆಯುವುದಿಲ್ಲ. ಫುಡ್‌ ಡೆಲಿವರಿಗೆ  ಅವಕಾಶವಿದೆ. ಬಾರ್‌ ತೆರೆಯುವುದಿಲ್ಲ ಎಂದರು. ನಾಗರಿಕರು ಕಾನೂನು ಮೀರಿ ವರ್ತಿಸಿದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಸಾರ್ವಜನಿಕರು  ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೆ ಓಡಾಡಬೇಕು ಎಂದು ಹೇಳಿದರು.

ಡಿಜಿಪಿ-ಆಯುಕ್ತರಿಂದ  ಚಾಲನೆ: ಇದುವ ರೆಗೂ ಬೆಂಗಳೂರಿನ ವಿವಿಧ ನಿಲ್ದಾಣಗಳಿಂದ 100 ರೈಲುಗಳು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದು, ಶುಕ್ರವಾರ 101ನೇ ರೈಲು ಹೋಗಿದೆ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ 4500 ಕಾರ್ಮಿಕರು  ಪ್ರಯಾಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಶುಕ್ರವಾರ ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಹೊರಟ ಶ್ರಮಿಕ್‌ ರೈಲಿಗೆ ಚಾಲನೆ ನೀಡಿದರು. ಈ ವೇಳೆ ಕಾರ್ಮಿಕರು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next