Advertisement

ಸಿ.ಟಿ.ರವಿ ಅರೆ ಹುಚ್ಚ..! ಆರ್‌ಎಸ್‌ಎಸ್‌ ಚಡ್ಡಿಗಳು ಸ್ವಾತಂತ್ರ ತಂದು ಕೊಟ್ಟವರಲ್ಲ..!

11:24 AM Aug 19, 2021 | Team Udayavani |

ಶಿವಮೊಗ್ಗ: ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಪ್ರಧಾನಿಗಳ ವಿರುದ್ಧ ನಿರಂತರವಾಗಿ ಹೇಳಿಕೆಗಳನ್ನ ನೀಡುತ್ತಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹರಿಹಾಯ್ದರು.

Advertisement

ಶಿವಮೊಗ್ಗದಲ್ಲಿಂದು ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ 77 ನೇ ಜನ್ಮದಿನಾಚರಣೆ ಅಂಗವಾಗಿ ‘ರನ್‌ ಫಾರ್‍ ರಾಜೀವ್‌ ಮ್ಯಾರಥಾನ್‌’ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿ.ಟಿ.ರವಿ ಒಬ್ಬ ಅರೆಹುಚ್ಚ..! ಯಾಕೆ ಈಗ ಆತ ಈ ತರಹದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರೆ ಮಂತ್ರಿ ಪದವಿ ಸಿಕ್ಕಿಲ್ಲ. ಅವರಿಗೆ ಮಂತ್ರಿಯಾಗುವ ಬಯಕೆ ಇದೆ. ಈ ತರಹ ಗಾಂಧಿ ಪರಿವಾರದ ವಿರುದ್ಧ ಮಾತನಾಡಿದರೆ ಮಂತ್ರಿ ಪದವಿ ಖಚಿತವಾಗಿ ಸಿಗುತ್ತದೆ ಎಂಬುದು ರವಿ ನಂಬಿಕೆ.  ಇನ್ನು ಅಮಿತ್‌ ಶಾ, ನರೇಂದ್ರ ಮೋದಿ ಹಾಗೂ ಸಂಘ ಪರಿವಾರದ ನಾಯಕರನ್ನ ಮೆಚ್ಚಿಸಬೇಕಿದೆ. ರವಿ ಅವರಿಗೇನಾದರೂ ಮಾನ ಮರ್ಯಾದೆ ಇದ್ದರೆ ನೆಹರು ಹಾಗೂ ರಾಜೀವ್‌ ಗಾಂಧಿ ಬಗ್ಗೆ ತಿಳಿದುಕೊಂಡು ಮಾತನಾಡದಬೇಕು. ದೇಶಕ್ಕೆ ಅವರದ್ಧೇ ಆದ ಕೊಡುಗೆ ಇದೆ. ದೇಶಕ್ಕಾಗಿ ಸೆರೆವಾಸ ಅನುಭವಿಸಿದವರು ನೆಹರು. ಅದನ್ನೆಲ್ಲಾ ಇವರು ಮರೀಬಾರದು ಎಂದರು.

ಇದನ್ನೂ ಓದಿ:ಭಾರೀ ಪ್ರಮಾಣದ ಹಣದೊಂದಿಗೆ ಅಫ್ಘಾನ್ ನಿಂದ ಪಲಾಯನ ಮಾಡಿಲ್ಲ: ಅಶ್ರಫ್ ಘನಿ

ಬಿಜೆಪಿ ನಾಯಕರ ಹುಚ್ಚು ಬಿಡಿಸಲು ಸ್ವತಃ ಕಾಂಗ್ರೆಸ್‌ ವೆಚ್ಛ ಭರಿಸಿ ಇಂಗ್ಲೆಂಡ್‌ನ ಬ್ರಾಡ್‌ಮೋರ್ ಆಸ್ಪತ್ರೆಗೆ ಸೇರಿಸುತ್ತೇವೆ. ಆರ್‌ಎಸ್‌ಎಸ್‌ ಮನಸ್ಥಿತಿಯವರಿಗೆ ಇಂಥಹ ವಿಷಯಗಳೇ ಸಿಗುವುದು. ಈ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಮುಖಂಡರು ದೇಶಕ್ಕಾಗಿ ಒಂದಾದರೂ ಒಳ್ಳೇ ಕೆಲಸ ಮಾಡಿದ್ದರೆ, ಸ್ವಾತಂತ್ರ ಸಂಗ್ರಾಮದಲ್ಲಿ ಆರ್‌ಎಸ್‌ಎಸ್‌ ಚಡ್ಡಿಗಳೇನಾದರೂ ಭಾಗವಹಿಸಿದ್ದರೆ ಆಗ ಹೇಳಲಿ. ಇಬ್ಬರು ಪ್ರಧಾನಿಗಳು, ರಾಜೀವ್‌ ಹಾಗೂ ಇಂದಿರಾ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದವರು. ಅವರ ಬಗ್ಗೆ ಈ ತರಹ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next