Advertisement

ಸಿ.ಟಿ.ರವಿ ಕಾರು ಅಪಘಾತ ಪ್ರಕರಣ ಇತ್ಯರ್ಥ

12:29 AM Feb 28, 2019 | |

ಮಂಡ್ಯ: ಬಿಜೆಪಿ ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣ ರಾಜಿ-ಸಂಧಾನದ ಮೂಲಕ ಇತ್ಯರ್ಥವಾಗಿದೆ. ನಗರದ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಬಲರಾಮೇಗೌಡರ ನಿವಾಸದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಆಗಮಿಸಿದ ಶಾಸಕ ರವಿ ಮೃತ ಶಶಿ ಹಾಗೂ ಸುನಿಲ್‌ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ಕೊಡುವ ಮೂಲಕ ರಾಜಿ ಸಂಧಾನ ಮಾಡಿಕೊಂಡರು.

Advertisement

ನಿಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿ ಇರುತ್ತೇನೆ. ಇನ್ನು ಮುಂದೆಯೂ ಕಷ್ಟದಲ್ಲಿ ಸಹಾಯ ಮಾಡುವೆ ಎಂದು ಭರವಸೆ ನೀಡಿದ್ದರಿಂದ ಅಂತಿಮವಾಗಿ ಮೃತ ಯುವಕರ ಕುಟುಂಬದವರು ರಾಜಿ-ಸಂಧಾನಕ್ಕೆ ಒಪ್ಪಿಗೆ ಸೂಚಿಸಿದರು. ಬಳಿಕ ಮಾತನಾಡಿದ ಸಿ.ಟಿ.ರವಿ, ಮಾನವೀಯತೆ ದೃಷ್ಟಿಯಿಂದ
ಪರಿಹಾರ ನೀಡಿದ್ದೇನೆ. ಸಂಧಾನದ ಮಾತುಕತೆಯಾಗಿಲ್ಲ ಎಂದಷ್ಟೇ ಹೇಳಿ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next