Advertisement

ಒಕ್ಕಲಿಗರಿಗೆ ಮಾಡಿರುವ ಅಪಮಾನ: ಸಿ.ಟಿ.ರವಿ 

07:15 AM Apr 16, 2018 | Team Udayavani |

ಚಿಕ್ಕಮಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿರುವ ಹೇಳಿಕೆ ಖಂಡನೀಯ. 

Advertisement

ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗಿ ಆದಿತ್ಯನಾಥ ವಿರುದ್ಧ ದಿನೇಶ್‌ ನೀಡಿರುವ ಹೇಳಿಕೆ ಖಂಡನೀಯ. ಅವರ ಹೇಳಿಕೆಯಿಂದ ನಾಥ ಪದ್ಧತಿ ನಂಬಿರುವ ಜನತೆಗೆ ತೀವ್ರ ನೋವಾಗಿದೆ. ಅವರ ಹೇಳಿಕೆ ಕೇವಲ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಮಾಡಿರುವ ಅಪಮಾನವಲ್ಲ. ನಾಥ ಪದ್ಧತಿಯನ್ನು ಅನುಸರಿಸುವ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅಪಮಾನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next