Advertisement

ಸಿದ್ದರಾಮಯ್ಯ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬರಲಿ : ಸಿ.ಟಿ. ರವಿ

07:39 PM Aug 23, 2020 | sudhir |

ಚಿಕ್ಕಮಗಳೂರು: ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ ಅನಿಸುತ್ತಿದೆ ಎಂದು ಸಚಿವ ಸಿ.ಟಿ. ರವಿ, ಸಿದ್ದರಾಮಯ್ಯ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ.

Advertisement

ಭಾನುವಾರ ನಗರದಲ್ಲಿ ವಿಡಿಯೋ ಸಂದೇಶ ನೀಡಿರುವ ಸಿ.ಟಿ. ರವಿ ಅವರು, ಸಂಘ ಪರಿವಾರ ಹೇಳಿಕೊಡುವುದು ದೇಶಭಕ್ತಿಯನ್ನು. ಸಂಘ ನೀಡುವ ಸಂಸ್ಕಾರವನ್ನು, ಸಂಘವನ್ನು ನೀವು ಎಷ್ಟು ಹತ್ತಿರದಿಂದ ನೋಡಿದ್ದೀರಾ? ಹತ್ಯೆ ಮಾಡುವುದನ್ನು ಸಂಘ ಪರಿವಾರ ಹೇಳಿಕೊಟ್ಟಿದ್ದರೆ ಬಹುತೇಕರು ಭೂಮಿಯ ಮೇಲಿರುತ್ತಿರಲಿಲ್ಲ.

ಅನೇಕರು ಸಂಘ ಪರಿವಾರವನ್ನು ಟೀಕಿಸಿದ್ದಾರೆ. ಆದರೆ ಹತ್ಯೆ ರಾಜಕೀಯದ ಮೇಲೆ ಸಂಘ ನಂಬಿಕೆ ಇಟ್ಟಿಲ್ಲ. ನಿಮ್ಮ ಸ್ವಾರ್ಥಕ್ಕೆ ದೇಶಭಕ್ತ ಸಂಘಟನೆಯ ಮೇಲೆ ಆರೋಪಿಸಬೇಡಿ. ಸಂಘ ಪರಿವಾರವನ್ನು ಟೀಕಿಸುವ ಭರದಲ್ಲಿ ದೇಶ ಒಡೆಯುವ ಸಂಚು ರೂಪಿಸುವವರಿಗೆ ಬೆಂಬಲಿಸುವ ಪಾಪದ ಕೆಲಸಕ್ಕೆ ಕೈ ಹಾಕಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next