Advertisement

ಕಾಶ್ಮೀರ:ಸಿಆರ್‌ಪಿಎಫ್ ವಾಹನಕ್ಕೆ ಯುವಕ ಬಲಿ;ವ್ಯಾಪಕ ಹಿಂಸಾಚಾರ 

10:00 AM Jun 02, 2018 | |

ಶ್ರೀನಗರ: ಕಾಶ್ಮೀರದ ನೌಹಟ್ಟಾ ಪ್ರದೇಶದ ಜಾಮೀಯಾ ಮಸೀದಿ ಬಳಿ ಶುಕ್ರವಾರ ಪ್ರಾರ್ಥನೆ ಬಳಿಕ ಭದ್ರತಾ ಸಿಬಂದಿಗಳ ಮೇಲೆ ಯುವಕರು ವ್ಯಾಪಕ ಕಲ್ಲು ತೂರಾಟ ನಡೆಸಿದ್ದು , ಈ ವೇಳೆ ಉದ್ರಿಕ್ತರನ್ನು ಚದುರಿಸಲು ಕಾರ್ಯಾಚರಣೆಗಿಳಿದ ಸಿಆರ್‌ಪಿಎಫ್ ಪಡೆಗಳ ವಾಹನ ಯುವಕರಿಬ್ಬರ ಮೇಲೆ ಹರಿದು ಒಬ್ಬಾತ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. 

Advertisement

21 ರ ಹರೆಯದ ಯುವಕನ ಸಾವಿನ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಸ್ಥಳದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಯಾವುದೇ ಕ್ಷಣದಲ್ಲೂ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿವೆ. 

ಇನ್ನೋರ್ವ ಗಂಭೀರ ಗಾಯಾಳುವಿಗೆ ಸ್ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. 

ಘಟನೆ ಕುರಿತು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಕುರಿತು ವಿಪಕ್ಷಗಳು ವ್ಯಾಪಕ ಟೀಕೆ ನಡೆಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next