Advertisement

ವಿಜಯಪುರ ಜಿಲ್ಲೆಯಲ್ಲಿ ಬೇವಿನ ಎಲೆ ಭಕ್ಷಕ ಕೀಟ ಪತ್ತೆ

10:58 PM Jun 24, 2020 | Hari Prasad |

ವಿಜಯಪುರ:ಜಿಲ್ಲೆಯ ಭೀಮಾ ನದಿ ಪಾತ್ರ ಹಳ್ಳಿಗಳಲ್ಲಿ ಬೇವಿನ ಮರಗಳ ಎಲೆಗಳನ್ನು ತಿನ್ನುವ ವಿಚಿತ್ರ ಕೀಟಗಳು ಪತ್ತೆಯಾಗಿವೆ.

Advertisement

ಇದರಿಂದಾಗಿ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದ್ದು ಈ ಕೀಟಗಳ ನಿಯಂತ್ರಣ ಹೇಗೆಂಬ ಚಿಂತೆಯಲ್ಲಿ ರೈತರು ಕಂಗಾಲಾಗಿದ್ದಾರೆ.

ಇಂಡಿ, ಚಡಚಣ ತಾಲೂಕುಗಳ ಲಚ್ಯಾಣ ಹಾಗೂ ಪಡನೂರು ಗ್ರಾಮಗಳ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಈ ಕೀಟಗಳು ಕಾಣಿಸಿಕೊಂಡಿದ್ದು, ವಿಷಕಾರಕ ಬೇವಿನ ಮರದ ಎಲೆಗಳನ್ನು ತಿಂದು ಹಾಕುತ್ತಿವೆ.

ಈ ವಿಚಿತ್ರ ಕೀಟಗಳು, ಬೆಳೆದು ನಿಂತಿರುವ ಕಬ್ಬು ಹಾಗೂ ಲಿಂಬೆ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗೆ ಹಾನಿ ಮಾಡುವ ಭೀತಿ ಕೂಡಾ ಇದೀಗ ಎದುರಾಗಿದೆ.

ತಕ್ಷಣವೇ ಜಿಲ್ಲಾಡಳಿತ ಹಾಗೂ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಬೇವಿನ ಎಲೆ ಭಕ್ಷಕ ಕೀಟಗಳ ಹಾವಳಿ ನಿಗ್ರಹಕ್ಕೆ ಕ್ರಮ ಕೈಗೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next