Advertisement

ರಾಯಚೂರು: ಆಹಾರ ಅರಸಿ ಊರಿಗೆ ನುಗ್ಗಿದ ಮೊಸಳೆ… ಕಂಗಾಲಾದ ಗ್ರಾಮಸ್ಥರು

05:27 PM Jul 05, 2023 | Team Udayavani |

ರಾಯಚೂರು: ಮಳೆ ಕೊರತೆಯಿಂದ ಕೃಷ್ಣ ನದಿ ಖಾಲಿಯಾಗಿದ್ದು, ಆಹಾರವರಸಿ ಮೊಸಳೆಗಳು ನದಿ ತೀರ ತೊರೆದು ಊರುಗಳಿಗೆ ಬರುತ್ತಿವೆ.

Advertisement

ತಾಲೂಕಿನ ಶಕ್ತಿನಗರದ ಎಸ್ ಬಿಟಿ ಕಾಲನಿಗೆ ಮೊಸಳೆ ನುಗ್ಗಿದ್ದು, ಗ್ರಾಮಸ್ಥರು ಮೊಸಳೆ ನೋಡಿ ಆತಂಕಗೊಂಡಿದ್ದಾರೆ. ಓಡಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಮೊಸಳೆ ಓಡಿಸಲು ಹೋದವರ ಮೇಲೆಯೇ ದಾಳಿಗೆ ಯತ್ನಿಸಿದೆ.

ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಗ್ಗದಲ್ಲಿ ಮೊಸಳೆ ಸೆರೆ ಹಿಡಿದಿದ್ದಾರೆ. ಬಳಿಕ ಮತ್ತೆ ಕೃಷ್ಣ ನದಿಗೆ ಬಿಡಲಾಗಿದೆ.

ಇದನ್ನೂ ಓದಿ: ಪೆಟ್ರೋಲ್‌ ಲೀಟರ್‌ ಗೆ 15 ರೂ.ಗೆ ಲಭ್ಯವಾಗುತ್ತೆ…ಆದರೆ; ಸಚಿವ ನಿತಿನ್‌ ಗಡ್ಕರಿ ವಾದವೇನು?

 

Advertisement
Advertisement

Udayavani is now on Telegram. Click here to join our channel and stay updated with the latest news.

Next