Advertisement

ದನ ಮೇಯಿಸಲು ಹೋಗಿದ್ದವನ ಮೇಲೆ ಮೊಸಳೆ ದಾಳಿ: ಮೊಸಳೆಯ ಒಂದೇ ಹೊಡೆತಕ್ಕೆ ವ್ಯಕ್ತಿ ಬಲಿ!

12:51 PM Sep 04, 2021 | Team Udayavani |

ಬಳ್ಳಾರಿ: ದನ ಮೇಯಿಸಲು ನದಿ ತೀರಕ್ಕೆ ಹೋಗಿದ್ದ ವ್ಯಕ್ತಿಯೋರ್ವನ ಮೇಲೆ ಮೊಸಳೆಯೊಂದು ದಾಳಿ ಮಾಡಿದ ಘಟನೆ ಸಿರಗುಪ್ಪ ತಾಲೂಕಿನ ನಿಟ್ಟೂರಿನ ತುಂಗಭದ್ರಾ ನದಿ ತೀರದಲ್ಲಿ ನಡೆದಿದೆ. ಮೊಸಳೆ ದಾಳಿಗೆ ಸಿಲುಕಿದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Advertisement

ಮೃತಪಟ್ಟ ವ್ಯಕ್ತಿಯನ್ನು ನಿಟ್ಟೂರಿನ ವೀರೇಶ್ (45 ವ) ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.

ವೀರೇಶ್ ಅವರು ದನ ಮೇಯಿಸಲು ನದಿ ತೀರಕ್ಕೆ ಹೋಗಿದ್ದಾಗ ದಿಢೀರನೆ ಬಂದ ಮೊಸಳೆ ದಾಳಿ ಮಾಡಿದೆ. ಮೊಸಳೆಯು ವೀರೆಶ್ ಅವರ ತೊಡೆಯ ಭಾಗಕ್ಕೆ ಕಚ್ಚಿರುವ ಕಾರಣದಿಂದ ವೀರೇಶ್ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಬೆರಿಸ್ಟೋ ಮೇಲೆ ಹಲ್ಲೆ ಆರೋಪ: ವಿಚಿತ್ರ ಅಭಿಮಾನಿ ‘ಜಾರ್ವೋ’ ಇದೀಗ ಪೊಲೀಸರ ಅತಿಥಿ!

ಪದೇ ಪದೇ ಸಿರಗುಪ್ಪ ಭಾಗದಲ್ಲಿ ಮೊಸಳೆ ದಾಳಿಯಾಗುತ್ತಿರುವುದು ಸ್ಥಳೀಯರಲ್ಲಿ ಅತಂಕ ಮೂಡಿಸಿದೆ. ಹಲವು ಬಾರಿ ಮೊಸಳೆ ಇರುವ ಬಗ್ಗೆ ಎಚ್ಚರಿಕೆ ನಾಮಫಲಕ ಹಾಕುವಂತೆ ಒತ್ತಾಯಸಿದರೂ ಸ್ಥಳೀಯ ಆಡಳಿತ ಕ್ರಮ ತೆಗೆದುಕೊಂಡಿಲ್ಲ.

Advertisement

ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next