Advertisement

ಉಪ್ಪಿನಂಗಡಿ: ತೆಂಗಿನಕಾಯಿ ವಿಚಾರದ ಗಲಾಟೆಯಲ್ಲಿ ತಂದೆಯನ್ನೇ ಕಡಿದುಕೊಂದ ಮಕ್ಕಳು

04:27 PM Jun 15, 2020 | keerthan |

ಪುತ್ತೂರು: ಮನೆಯ ಮರದ ತೆಂಗಿನಕಾಯಿ ಮಾರಾಟದ ವಿಚಾರದಲ್ಲಿ ನಡೆದ ಗಲಾಟೆ ಮಕ್ಕಳಿಬ್ಬರು ಸೇರಿ ತಂದೆಯನ್ನೇ ಕೊಂದು ಹಾಕುವಲ್ಲಿ ಅಂತ್ಯವಾದ ದುರ್ಘಟನೆ ಉಪ್ಪಿನಂಗಡಿಯ ಕರಾಯದಲ್ಲಿ ನಡೆದಿದೆ.

Advertisement

ಈ ಘಟನೆ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ಜೂ.14ರಂದು ಮಧ್ಯರಾತ್ರಿ ನಡೆದಿದ್ದು, ಧರ್ನಪ್ಪ ಪೂಜಾರಿ (65) ಎಂಬವರು ಕೊಲೆಯಾದ ವ್ಯಕ್ತಿ.

ಧರ್ನಪ್ಪನವರ ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ನಡೆಸಿದ್ದು, ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಧರ್ನಪ್ಪ ಪೂಜಾರಿಯವರು ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ ವಿಚಾರಕ್ಕೆ ಆಗಾಗ ಪತ್ನಿ, ಮಕ್ಕಳು ಇವರಲ್ಲಿ ಜಗಳ ಮಾಡುತ್ತಿದ್ದರು. ಆದಿತ್ಯವಾರ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳೊಳಗೆ ಜಗಳವಾಗಿದ್ದು, ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದಾರೆ.

ಹಲ್ಲೆಗೊಳಗಾದ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next