Advertisement

ಜಮೀನು ವಿವಾದ ಹಿನ್ನೆಲೆ ಕಾರು ಡಿಕ್ಕಿ ಹೊಡೆಸಿ ಮಹಿಳೆ ಹತ್ಯೆ?

03:33 PM Jan 03, 2023 | Team Udayavani |

ನಾಗಮಂಗಲ: ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಮಹಿಳೆ ಮೇಲೆ ಕಾರು ಗುದ್ದಿಸಿ ಕೊಂದಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿ ಗಾಣಸಂದ್ರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಗ್ರಾಮದ ಜಯಲಕ್ಷ್ಮಮ್ಮ (39) ಸಾವನ್ನಪ್ಪಿದ ಮಹಿಳೆ. ಗ್ರಾಮದ ಸರ್ವೆ ನಂ. 84ರ ಪೈಕಿ ಜಯಲಕ್ಷ್ಮಮ್ಮ, ರಾಮಕೃಷ್ಣ, ದೇವರಾಜು, ಗೌಡಪ್ಪ, ಅನಿಲ್‌ ಎರಡು ಕುಟುಂಬದ ನಡುವೆ ಗಲಾಟೆ ನಡೆಯುತ್ತಿದ್ದು ಇದೇ ವಿಚಾರವಾಗಿ ನಾಗಮಂಗಲ ನ್ಯಾಯಾಲದಲ್ಲಿ ವಾದ ನಡೆಯುತ್ತಿದೆ ಎನ್ನಲಾಗಿದೆ. ಆ ದಿನ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿದೆ.

ಗಲಾಟೆ ನಡೆದು ರಸ್ತೆ ಬದಿಯಲ್ಲಿ ಜಯಲಕ್ಷ್ಮಮ್ಮ ನಿಂತಿದ್ದಾಗ ಅನಿಲ್‌ ಕಾರಿನಲ್ಲಿ ಬಂದು ಗುದ್ದಿದ್ದಾನೆ. ತೀವ್ರವಾಗಿ ಗಾಯಗೊಂಡ ಜಯಲಕ್ಷ್ಮಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಂತರ ಆರೋಪಿಗಳು ಪರಾರಿಯಾಗಿದ್ದು, ಶವ ವನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿಡಲಾಗಿದೆ.

ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಇದೇ ವಿಚಾರವಾಗಿ ಗ್ರಾಮದಲ್ಲಿಯೂ ಗ್ರಾಮಸ್ಥರು ಇಬ್ಬರಿಗೂ ನ್ಯಾಯ ತೀರ್ಮಾನ ಮಾಡಿದ್ದರು. ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next