Advertisement

ಮಹಿಳೆಯಿಂದ ಸೊಸೈಟಿಗೆ ವಂಚನೆ: ಕೇಸು ದಾಖಲು

12:38 AM Oct 20, 2022 | Team Udayavani |

ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತಕ್ಕೆ ಶಿಲ್ಪಾ ಗಜಾನನ ಪೂಂಜ ಮತ್ತು ಅವರ ಮಕ್ಕಳು ವಂಚನೆ ಮಾಡಿರುವ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

Advertisement

ಶಿಲ್ಪಾ ಮತ್ತು ಅವರ ಮಕ್ಕಳು ಸೊಸೈಟಿಗೆ 1.5 ಕೋ.ರೂ. ಸಾಲ ಮರುಪಾವತಿ ಮಾಡಲು ಬಾಕಿ ಇದೆ. ಸಾಲ ಮರುಪಾವತಿಗಾಗಿ ನೀಡಿದ ಚೆಕ್‌ಗಳು ಅಮಾನ್ಯವಾಗಿವೆ. ಅದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ.

ಬಾಕಿ ಇರುವ ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಲು ಮತ್ತು ಆ ಪ್ರಕರಣಕ್ಕೆ ಸಹಾಯವಾಗುವಂತೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಿ ಸುಳ್ಳು ಆಪಾದನೆ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೆ ಸಾಲ ಮರುಪಾವತಿಗಾಗಿ ಶಿಲ್ಪಾ ಮತ್ತು ಅವರ ಮಕ್ಕಳು ನೀಡಿದ ಬೆರರ್‌ ಚೆಕ್‌ನಲ್ಲಿ 2.54 ಲ.ರೂ.ಗಳನ್ನು ಅವರ ಸಾಲದ ಖಾತೆಗೆ ಜಮೆ ಮಾಡಲಾಗಿದೆ. ಇದರಲ್ಲಿ ಸೊಸೈಟಿಯಿಂದ ವಂಚನೆಯಾಗಿಲ್ಲ ಎಂದು ಸೊಸೈಟಿಯ ಕಾರ್ಯದರ್ಶಿ ಚಂದ್ರಿಕಾ ಡಿ. ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next