ಕುಂದಾಪುರ: ಅಕ್ರಮ ಮರಳುಗಾರಿಕೆ ದಂಧೆ ನಿರತರು ಕಂಡ್ಲೂರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶನಿವಾರವೂ ತನಿಖೆ ಮುಂದುವರಿದಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ 19 ಮಂದಿ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ 3 ತಂಡಗಳನ್ನು ರಚಿಸಲಾಗಿದೆ.
ಈಗಾಗಲೇ ಆಯಕಟ್ಟಿನ 4 ಕಡೆ ಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯ ಲಾಗಿದ್ದು, ಅನುಮಾನಾಸ್ಪದ ವಾಹನ ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಮರಳು ಅಡ್ಡೆಯ ಬಳಿ ಹಾಗೂ ಕಂಡ್ಲೂರು ಪೇಟೆಯಲ್ಲೂ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಆರೋಪಿಗಳ ಪೈಕಿ 9 ಮಂದಿ ರೌಡಿ ಶೀಟರ್ಗಳಾಗಿದ್ದರೆ, 6 ಮಂದಿ ಹಿಂದೆ ಡಿಸಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿಯೂ ಭಾಗಿ ಯಾಗಿದ್ದರು.
Advertisement
*ನೀರಿನ ಟ್ಯಾಂಕರ್ ಚಾಲಕನಿಗೆ ಹಲ್ಲೆ!
ಸುರತ್ಕಲ್: ತಂದಿದ್ದ ನೀರು ಮುಗಿಯಿತು, ಮತ್ತೂಮ್ಮೆ ಹೋಗಿ ತರುತ್ತೇನೆ ಎಂದು ಹೇಳಿದ್ದಕ್ಕೆ ಪಾಲಿಕೆಯ ಟ್ಯಾಂಕರ್ ಚಾಲಕ ಬಸವರಾಜ್ ಎಂಬಾತನಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಚೊಕ್ಕಬೆಟ್ಟಿನಲ್ಲಿ ನಡೆದಿದೆ.
ತತ್ಕ್ಷಣ ಪಾಲಿಕೆ ಅಕಾರಿ ಅಬ್ದುಲ್ ಖಾದರ್ ಹಾಗೂ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಪಾಲಿಕೆ ನೇಮಿಸಿದ ಟ್ಯಾಂಕರ್ ಸಿಬಂದಿಗೆ ಹಲ್ಲೆ ನಡೆಸಿದರೆ ಮುಂದೆ ನೀರು ಸರಬರಾಜು ಮಾಡಲು ಯಾರೂ ಮುಂದೆ ಬರಲಾರರು ಎಂದು ಖಾದರ್ ಎಚ್ಚರಿಕೆ ನೀಡಿದರು. ಬಳಿಕ ಆರೋಪಿಗೆ ಎಚ್ಚರಿಕೆ ನೀಡಿ ಬಿಡಲಾಯಿತು.
ಮಂಗಳೂರು: ದಾಖಲೆ ಪತ್ರಗಳಿಲ್ಲದೆ ದಾವಣಗೆರೆಯಿಂದ ಮಂಗಳೂರಿಗೆ 24 ಲ. ರೂ. ಸಾಗಿಸುತ್ತಿದ್ದ ದಾವಣಗೆರೆಯ ನಿವಾಸಿ ಮಂಜುನಾಥ್ (40)ನನ್ನು ಬಂದರು ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸರು ಶನಿವಾರ ಬೆಳಗ್ಗೆ ನಗರದ ಕಾರ್ಸ್ಟ್ರೀಟ್ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಐಟಿ ದಾಳಿ: ಶುಕ್ರವಾರ ಬೆಂಗಳೂರಿನಿಂದ ಬಂದಿದ್ದ ಇನ್ನೋರ್ವ ಮಂಜುನಾಥನಿಂದ 1 ಕೋ. ರೂ. ಗಳನ್ನು ಬಂದರು ಪೊಲೀಸರು ವಶ ಪಡಿಸಿದ್ದರು. ಅದರ ಬೆನ್ನಿಗೇ ಶನಿವಾರ ಐಟಿ ಅಧಿಕಾರಿಗಳು ಕಾರ್ಸ್ಟ್ರೀಟ್ನ ಉದ್ಯಮಿಯೊಬ್ಬರ ಮನೆಗೆ ದಾಳಿ ಮಾಡಿದ್ದಾರೆ. ತನಿಖೆ ಇನ್ನೂ ಮುಂದುವರಿಯುತಿದೆ.