Advertisement

ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ 60 ಲಕ್ಷ ರೂ. ವಶಕ್ಕೆ : ಮೂವರು ಕಸ್ಟಡಿಗೆ

11:46 PM Sep 05, 2022 | Team Udayavani |

ಕಾಸರಗೋಡು: ಸರಿಯಾದ ದಾಖಲು ಪತ್ರಗಳಿಲ್ಲದೆ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 60 ಲಕ್ಷ ರೂ. ಯನ್ನು ಬೇಕಲ ಮುದಿಯಕ್ಕಾಲ್‌ನಿಂದ ಬೇಕಲ ಪೊಲೀಸರು ವಶಪಡಿಸಿದ್ದಾರೆ.

Advertisement

ಈ ಸಂಬಂಧ ರಾಜಪುರದ ಬೆನ್ನಿ ಅಬ್ರಹಾಂ(53), ಉದುಮ ಪಾಕದ ಸಿ.ಕೆ.ಉಣ್ಣಿಕೃಷ್ಣನ್‌(35) ಮತ್ತು ಮಹಾರಾಷ್ಟ್ರದ ಮಹೇಶ್‌ ರೆಡ್ಡಿ(35)ನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಜಮ್ಮುವಿನಲ್ಲಿ ಪ್ರತ್ಯೇಕ ಅವಘಡ: ಕಾರುಗಳು ಪ್ರಪಾತಕ್ಕೆ ಉರುಳಿ 7 ಬಲಿ

ಬೇಕಲ ಡಿವೈಎಸ್‌ಪಿ ಸಿ.ಕೆ.ಸುನಿಲ್‌ ಕುಮಾರ್‌ ಅವರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಬೇಕಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next