Advertisement

Crime ಕುಂಬಳೆ: ಕೊಲೆ ಪ್ರಕರಣದ ಆರೋಪಿಯ ಹತ್ಯೆ

11:46 PM Oct 02, 2023 | Team Udayavani |

ಕುಂಬಳೆ: ಕೊಲೆ ಪ್ರಕರಣವೊಂದರ ಆರೋಪಿ ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಮೃತದೇಹವನ್ನು ಕುಂಬಳೆ ಬಳಿಯ ಕುಂಟಂಗೇರಡ್ಕ ಐಎಚ್‌ಆರ್‌ಡಿ ಕಾಲೇಜಿನ ಹಿಂಭಾಗದ ಪೊದೆಯೆಡೆಯಲ್ಲಿ ಎಸೆದು ಹೋದ ಘಟನೆ ನಡೆದಿದೆ.

Advertisement

ಈ ಹಿಂದೆ ಕುಂಬಳೆ ಬಳಿಯ ಶಾಂತಿಪಳ್ಳ ಲಕ್ಷಂವೀಡು ಕಾಲನಿ ನಿವಾಸಿಯಾಗಿದ್ದ, ಇದೀಗ ವಿದ್ಯಾನಗರದ ಕ್ವಾರ್ಟರ್ಸ್‌ವೊಂದರ ನಿವಾಸಿ ಮುಹಮ್ಮದಲಿ ಅವರ ಪುತ್ರ ಅಬ್ದುಲ್‌ ರಶೀದ್‌ ಯಾನೆ ಮೂಸ ರಶೀದ್‌ (38) ನನ್ನು ಕೊಲೆಗೈಯಲಾಗಿದೆ.

ಈತ 2019 ಅ. 18ರಂದು ಮಧೂರು ಪಟ್ಲ ನಿವಾಸಿ ಶೈನ್‌ ಯಾನೆ ಶಾನು (24) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next