Advertisement
ಜಾವೆದ್ ಖಾನ್ (25) ಕೊಲೆಯಾದವ. ಈ ಸಂಬಂಧ ಸಿಮ್ರಾನ್ ಮತ್ತು ಆಕೆಯ ಪತಿ ಜಿಹಾನ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಮನೆ ಬಳಿಬಂದು ಗಲಾಟೆ: ಈ ಮಧ್ಯೆ ಶನಿವಾರ ಬೆಳಗ್ಗೆ ಸಿಮ್ರಾನ್ ಮನೆಗೆ ನುಗ್ಗಿದ ಜಾವೆದ್ ಖಾನ್ ತನ್ನೊಂದಿಗೆ ಇರಬೇಕು ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ದಂಪತಿ ಚಾಕುವಿನಿಂದ ಜಾವೆದ್ ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ ಎನ್ನಲಾಗಿದೆ.
ತೀವ್ರ ರಕ್ತಸ್ರಾವಗೊಂಡಿದ್ದ ಜಾವೆದ್ ಸಮೀಪದಲ್ಲಿರುವ ಜೀವ ಉಳಿಸುವಂತೆ ತಾನೇ ಆಸ್ಪತ್ರೆ ಬಳಿ ಹೋಗಿದ್ದಾನೆ. ಆದರೆ, ಬಾಗಿಲ ಬಳಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು,
ಸಿಮ್ರಾನ್ ದಂಪತಿ, “ಜಾವೆದ್ ಖಾನ್ ತನ್ನನ್ನು ಬೆದರಿಸಲು ಚಾಕು ತಂದಿದ್ದು, ಆತನ ಮಾತಿಗೆ ಬೆಲೆ ಕೊಡದಕ್ಕೆ ಆತನೇ ಚುಚ್ಚಿಕೊಂಡಿದ್ದಾನೆ’ ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ವೈದ್ಯರು, ಗಾಯದ ಸ್ವರೂಪ ನೋಡಿದರೆ ಇದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಬಲವಾಗಿ ಇರಿದಾಗ ಈ ರೀತಿಯ ಅನಾಹುತ ಆಗುತ್ತದೆ ಎಂದಿದ್ದಾರೆ. ಹೀಗಾಗಿ ದಂಪತಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.