Advertisement

ವಿವಾಹಿತೆಯ ಹಿಂದೆ ಬಿದ್ದ ಮೆಕ್ಯಾನಿಕ್‌ ಹುಡುಗನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದ ದಂಪತಿ

12:10 PM Jul 17, 2022 | Team Udayavani |

ಬೆಂಗಳೂರು: ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮೆಕ್ಯಾನಿಕ್‌ನನ್ನು ದಂಪತಿ ಕೊಲೆಗೈದಿರುವ ಘಟನೆ ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

Advertisement

ಜಾವೆದ್‌ ಖಾನ್‌ (25) ಕೊಲೆಯಾದವ. ಈ ಸಂಬಂಧ ಸಿಮ್ರಾನ್‌ ಮತ್ತು ಆಕೆಯ ಪತಿ ಜಿಹಾನ್‌ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

8 ತಿಂಗಳ ಹಿಂದೆ ಸಿಮ್ರಾನ್‌ ದಂಪತಿ ಶಿವಾಜಿನಗರಕ್ಕೆ ಬಂದಿದ್ದರು. ಇತ್ತೀಚೆಗೆ ಮನೆ ಬದಲಾವಣೆ ಮಾಡಲು ನಿರ್ಧರಿಸಿದ್ದರು. ಆಗ ಎಸಿ ಮೆಕ್ಯಾನಿಕ್‌ ಜಾವೆದ್‌ ಖಾನ್‌ ಪರಿಚಯವಾಗಿದ್ದು, ಸಿಮ್ರಾನ್‌ ಮತ್ತು ಜಾವಾದ್‌ ಖಾನ್‌ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವಿಚಾರ ತಿಳಿದ ಜಿಹಾನ್‌, ಪತ್ನಿ ಮತ್ತು ಜಾವೆದ್‌ಗೆ ಎಚ್ಚರಿಕೆ ನೀಡಿದ್ದ. ಹೀಗಾಗಿ ಸಿಮ್ರಾನ್‌, ಪ್ರಿಯಕರನನ್ನು ದೂರ ಮಾಡಿದ್ದಳು.

ಆದರೆ, ಜಾವೆದ್‌ ಖಾನ್‌ ಆಗಾಗ್ಗೆ ಸಿಮ್ರಾನ್‌ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ. ಈ ಸಂಬಂಧ 3 ತಿಂಗಳ ಹಿಂದೆ ಶಿವಾಜಿನಗರ ಠಾಣೆಗೆ ದಂಪತಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಜಾವೆದ್‌ ಖಾನ್‌ನನ್ನು ಠಾಣೆಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಕಂಬದಕೋಣೆಯಲ್ಲಿ ರಸ್ತೆ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸಾವು

Advertisement

ಮನೆ ಬಳಿಬಂದು ಗಲಾಟೆ: ಈ ಮಧ್ಯೆ ಶನಿವಾರ ಬೆಳಗ್ಗೆ ಸಿಮ್ರಾನ್‌ ಮನೆಗೆ ನುಗ್ಗಿದ ಜಾವೆದ್‌ ಖಾನ್‌ ತನ್ನೊಂದಿಗೆ ಇರಬೇಕು ಎಂದು ಗಲಾಟೆ ಮಾಡಿದ್ದಾನೆ. ಈ ವೇಳೆ ದಂಪತಿ ಚಾಕುವಿನಿಂದ ಜಾವೆದ್‌ ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ ಎನ್ನಲಾಗಿದೆ.

ತೀವ್ರ ರಕ್ತಸ್ರಾವಗೊಂಡಿದ್ದ ಜಾವೆದ್‌ ಸಮೀಪದಲ್ಲಿರುವ ಜೀವ ಉಳಿಸುವಂತೆ ತಾನೇ ಆಸ್ಪತ್ರೆ ಬಳಿ ಹೋಗಿದ್ದಾನೆ. ಆದರೆ, ಬಾಗಿಲ ಬಳಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ದಂಪತಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು,

ಸಿಮ್ರಾನ್‌ ದಂಪತಿ, “ಜಾವೆದ್‌ ಖಾನ್‌ ತನ್ನನ್ನು ಬೆದರಿಸಲು ಚಾಕು ತಂದಿದ್ದು, ಆತನ ಮಾತಿಗೆ ಬೆಲೆ ಕೊಡದಕ್ಕೆ ಆತನೇ ಚುಚ್ಚಿಕೊಂಡಿದ್ದಾನೆ’ ಎಂದು ಹೇಳಿಕೆ ನೀಡಿದ್ದಾರೆ. ‌

ಆದರೆ, ವೈದ್ಯರು, ಗಾಯದ ಸ್ವರೂಪ ನೋಡಿದರೆ ಇದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಬಲವಾಗಿ ಇರಿದಾಗ ಈ ರೀತಿಯ ಅನಾಹುತ ಆಗುತ್ತದೆ ಎಂದಿದ್ದಾರೆ. ಹೀಗಾಗಿ ದಂಪತಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next