Advertisement
ಸೋಮವಾರ ಇಲ್ಲಿ ಆರಂಭಗೊಂಡ “ವಿಜಯ್ ಮರ್ಚಂಟ್ ಟ್ರೋಫಿ’ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ-ದಿಲ್ಲಿ ತಂಡಗಳು ಮುಖಾಮುಖಿಯಾಗಿವೆ. ಈ ತ್ರಿದಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹವಾಗ್ ಅವರ ಪುತ್ರರು ಆಡಲಿಳಿದಿದ್ದಾರೆ.
ಮೊದಲ ದಿನದಾಟದಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿಳಿದ ಜೂನಿಯರ್ ದ್ರಾವಿಡ್ ಖಾತೆ ತೆರೆಯದೆ ಔಟಾದರೆ, ಜೂನಿಯರ್ ಸೆಹವಾಗ್ 50 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅನ್ವಯ್ ಅವರನ್ನು ದಿಲ್ಲಿಯ ಯಶಸ್ವಿ ಬೌಲರ್ ಆಯುಷ್ ಲಾಕ್ರಾ 2ನೇ ಎಸೆತದಲ್ಲೇ ಬೌಲ್ಡ್ ಮಾಡಿದರು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 144ಕ್ಕೆ ಆಲೌಟಾಗಿದ್ದು, ದಿಲ್ಲಿ ಒಂದು ವಿಕೆಟಿಗೆ 107 ರನ್ ಗಳಿಸಿದೆ.