Advertisement

ಕ್ರಿಕೆಟ್‌ ಬೆಟ್ಟಿಂಗ್‌: ಎಂಟು ಮಂದಿ ಬಂಧನ

09:21 AM Apr 09, 2019 | Team Udayavani |

ಬೆಂಗಳೂರು: ಮೊಬೈಲ್‌ ಆ್ಯಪ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಇದುವರೆಗೂ ಎಂಟು ಮಂದಿಯನ್ನು ಬಂಧಿಸಿದ್ದು, ಲಕ್ಷಾಂತರ ರೂ. ವಶಪಡಿಸಿಕೊಂಡಿದ್ದಾರೆ.

Advertisement

ನೆಲಮಂಗಲದ ನಟರಾಜ, ಹೇಮಂತ್‌ ಜೈನ್‌, ಮುಕೇಶ್‌ ಕುಮಾರ್‌, ಪ್ರವೀಣ್‌ ಕುಮಾರ್‌, ಮಧು, ಶೇಖ್‌ ಶಫಿ, ವಿಶ್ವನಾಥ್‌, ಎಚ್‌.ವಿ.ಚೌಡೇಗೌಡ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಬಸವರಾಜು ಎಂಬಾತನ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಸಿಸಿಬಿಯ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಹೇಳಿದರು.

ತಲೆಮರೆಸಿಕೊಂಡಿರುವ ಬಸವರಾಜು ಹತ್ತಾರು ವರ್ಷಗಳಿಂದ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದು, ಕೋಟ್ಯಂತರ ರೂ. ಆಸ್ತಿ ಹಾಗೂ ದುಬಾರಿ ಬೆಲೆಯ ಜಾಗ್ವಾರ್‌ ಕಾರು ಖರೀದಿ ಮಾಡಿದ್ದಾನೆ. ಆ್ಯಪ್‌ ಮೂಲಕ ಟಿ-20, ಏಕದಿನ ಕ್ರಿಕೆಟ್‌ ಸೇರಿ ಎಲ್ಲ ರೀತಿಯ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಎಂದು ಅಲೋಕ್‌ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next