Advertisement

ಬಡ್ತಿಯಲ್ಲಿ ಕೆನೆ ಪದರ ಅಳವಡಿಸಲಾಗದು

06:25 AM Aug 17, 2018 | Team Udayavani |

ನವದೆಹಲಿ: ಕೆನೆ ಪದರ ಕಲ್ಪನೆಯನ್ನು ಅಳವಡಿಸಿಕೊಂಡು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿಯ ಸೌಲಭ್ಯವನ್ನು ತಿರಸ್ಕರಿಸಲಾಗದು ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Advertisement

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆಈ ಬಗ್ಗೆ ಮಾಹಿತಿ ನೀಡಿದ ಅಟಾರ್ನಿ ಜನ ರಲ್‌ ಕೆ.ಕೆ.ವೇಣುಗೋಪಾಲ್‌, ಕೆನೆ ಪದರ ಕಲ್ಪನೆಯನ್ನು ಅಳವಡಿಸಿ ಪ.ಜಾ/ಪ.ಪಂ ಸಮುದಾಯದ ನೌಕರರಿಗೆ ಸೌಲಭ್ಯ ನಿರಾಕರಿಸಬಹುದು ಎಂದು ಯಾವುದೇ ತೀರ್ಪು ಹೇಳಿಲ್ಲ ಎಂದಿದ್ದಾರೆ.

ಕೆನೆ ಪದರ ಅಳವಡಿಸಿ, ಪ.ಜಾ ಹಾಗೂ ಪ.ಪಂ ಸಮುದಾಯದಲ್ಲೇ ಹಿಂದುಳಿದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯ ಒದಗಿಸಿ, ಇತರರಿಗೆ ಸೌಲಭ್ಯವನ್ನು ನಿರಾಕರಿಸಬಹುದೇ ಎಂಬ ಬಗ್ಗೆ ನ್ಯಾಯಾಲಯ ಮಾಹಿತಿ ಕೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next