Advertisement

ಹೆಸರು ಬದಲಿಸಿಕೊಂಡ ಕ್ರೇಜಿ ಪುತ್ರ

10:00 AM Nov 18, 2019 | Lakshmi GovindaRaju |

ಚಿತ್ರರಂಗದಲ್ಲಿ ಈಗಾಗಲೇ ಹಲವು ಹೀರೋಗಳು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಆ ಸಾಲಿಗೆ ಈಗ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ಹೊಸ ಸೇರ್ಪಡೆ. ಹೌದು, ಮನೋರಂಜನ್‌ ತಮ್ಮ ಹೆಸರು ಬದಲಿಸಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಷ್ಟಕ್ಕೂ ಅವರು ಬದಲಿಸಿಕೊಂಡಿರುವ ಹೆಸರಲ್ಲಿ ದೊಡ್ಡ ಬದಲಾವಣೆಯೇನೂ ಇಲ್ಲ.

Advertisement

ತಮ್ಮ ಹೆಸರನ್ನು ಮನೋರಂಜನ್‌ ಬದಲಾಗಿ ಮನುರಂಜನ್‌ ಎಂದು ಬದಲಿಸಿಕೊಂಡಿದ್ದಾರಷ್ಟೇ. ಅಷ್ಟಕ್ಕೂ ಈ ಬದಲಾವಣೆಗೆ ಕಾರಣ, ಸಂಖ್ಯಾಶಾಸ್ತ್ರ. ಹೀಗಂತ ಸ್ವತಃ ಮನುರಂಜನ್‌ ಅವರೇ ಹೇಳುತ್ತಾರೆ. ಅಷ್ಟಕ್ಕೂ ಅವರು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಿರೋದು “ಮುಗಿಲ್‌ ಪೇಟೆ’ ಚಿತ್ರದ ಮೂಲಕ. ಹೌದು, ಭರತ್‌ ನಾವಂದ ನಿರ್ದೇಶನದ “ಮುಗಿಲ್‌ ಪೇಟೆ’ ಚಿತ್ರಕ್ಕೆ ಮೊನ್ನೆಯಷ್ಟೇ ಮುಹೂರ್ತ ನೆರವೇರಿದೆ.

ಈ ಚಿತ್ರದ ಶೀರ್ಷಿಕೆ ಪೋಸ್ಟರ್‌ ನೋಡಿದಾಗ, ಮನುರಂಜನ್‌ ಹೆಸರು ರಾರಾಜಿಸುತ್ತಿತ್ತು. ಹೆಸರು ಬದಲಿಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಮನುರಂಜನ್‌ ಹೇಳಿದ್ದು ಹೀಗೆ. “ಹೆಸರು ಬದಲಾಯಿಸಲು ಸಂಖ್ಯಾಶಾಸ್ತ್ರ ಬಿಟ್ಟರೆ ಬೇರೇನು ಇಲ್ಲ. ಮನೋರಂಜನ್‌ ಬದಲು ಮನುರಂಜನ್‌ ಎಂಬ ಹೆಸರಾಗಿದೆ. ಇಂಗ್ಲೀಷ್‌ನಲ್ಲಿ “ಓ’ ಬದಲಾಗಿ “ಯು’ ಬರೆಯಬೇಕಷ್ಟೇ. ಅಷ್ಟಕ್ಕೂ ನನ್ನನ್ನು ಎಲ್ಲರೂ ಮನು ಅನ್ನುತ್ತಿದ್ದರೇ ಹೊರತು, ಮನೋ ಅಂತ ಕರೆಯುತ್ತಿರಲಿಲ್ಲ.

ಸದ್ಯಕ್ಕೆ ನಾನೀಗ ಮನುರಂಜನ್‌. ಇದೇ ಹೆಸರು ಈ ಚಿತ್ರದ ಮೂಲಕ ಇರಲಿದೆ’ ಎಂದು ಸ್ಪಷ್ಟಪಡಿಸಿದರು ಮನುರಂಜನ್‌. ಈ ಚಿತ್ರದಲ್ಲಿ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಬಾಡಿ ಬಿಲ್ಡ್‌ ಕೂಡ ಮಾಡುತ್ತಿದ್ದಾರಂತೆ. ಆ ಕುರಿತು ಹೇಳುವ ಮನುರಂಜನ್‌, “ಚಿಲ್ಲಂ ಚಿತ್ರಕ್ಕಾಗಿ ಬಾಡಿ ಬಿಲ್ಡ್‌ ಮಾಡಿದ್ದೆ. ಆದರೆ, ಆ ಚಿತ್ರ ನಿಂತು ಹೋಯ್ತು. ಈ ಸಿನಿಮಾ ನಿರ್ಮಾಪಕ ಮೋತಿ ಮಹೇಶ್‌ ನನ್ನ ಗೆಳೆಯ.

ಅವನು ಈ ಕಥೆಗೆ ಸಖತ್‌ ಬಾಡಿ ಬಿಲ್ಡ್‌ ಮಾಡು ಅನ್ನುತ್ತಿದ್ದ. ಹಾಗಾಗಿ, ಬಾಡಿ ವರ್ಕೌಟ್‌ ಮಾಡುತ್ತಿದ್ದೇನೆ. ಪರ್ಸನಲಿ ನನಗೆ ದಪ್ಪ ಇರೋದು ಇಷ್ಟವಿಲ್ಲ. ಆದರೂ ಪಾತ್ರಕ್ಕಾಗಿ ಮಾಡುತ್ತಿದ್ದೇನೆ. ಈಗಾಗಲೇ ಚಿತ್ರದ ಪೋಸ್ಟರ್‌ ನೋಡಿರುವ ಡ್ಯಾಡಿ, ಹೇರ್‌ಸ್ಟೈಲ್‌ ಚೆನ್ನಾಗಿದೆ ಎಂದಿದ್ದಾರೆ. ಇಲ್ಲಿ ಎರಡು ರೀತಿಯ ಪಾತ್ರವಿದೆ. ಪಕ್ಕಾ ರಗಡ್‌ಲುಕ್‌ ಇರಲಿದೆ, ಸಾಫ್ಟ್ ಆಗಿಯೂ ಕಾಣಿಸಿಕೊಳ್ಳಲಿದ್ದೇನೆ’ ಎಂದಷ್ಟೇ ಹೇಳುತ್ತಾರೆ ಮನುರಂಜನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next