Advertisement

ತುಂಗಭದ್ರಾ ಎಡದಂಡೆ ಕಾಲುವೆ ಅಕ್ವಾಡೆಕ್ಟನಲ್ಲಿ‌ ಬಿರುಕು : ಆತಂಕದಲ್ಲಿ ರೈತರು

06:00 PM Sep 21, 2020 | mahesh |

ಗಂಗಾವತಿ: ತಾಲೂಕಿನ ಕೆಸರಹಟ್ಟಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಬಲಭಾಗದ ಅಕ್ವಾಡೆಕ್ಟನಲ್ಲಿ ಬಿರುಕು ಕಾಣಿಸಿಕೊಂಡಿದ್ದು ರೈತರೊಬ್ಬರು ಫೇಸ್ಬುಕ್ ವಾಟ್ಸಪನಲ್ಲಿ ಫೋಟೋ ಹಾಕಿ ಆತಂಕ‌ ವ್ಯಕ್ತಪಡಿಸಿದ್ದಾರೆ.

Advertisement

ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ಎರಡು ತಿಂಗಳ ಹಿಂದೆ ಭತ್ತ ನಾಟಿ ಮಾಡಿದ್ದು ಸತತ ಮಳೆಯಿಂದಾಗಿ ಭತ್ತದ ಬೆಳೆ ಚೆನ್ನಾಗಿ‌ ಬೆಳೆದಿದೆ. ಈ ಮಧ್ಯೆ ಕಾಲುವೆ ಅಕ್ವಾಡೆಕ್ಟನಲ್ಲಿಯ ಬಿರುಕು ಸುದ್ದಿ ಹರಡಿದ್ದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಎಡದಂಡೆ ಕಾಲುವೆಗೆ ಎರಡು ಭಾರಿ‌ ಬೋಂಗಾ ಬಿದ್ದು ಕಾಲುವೆ ಒಡೆದಿತ್ತು.

ರಾಯಚೂರು, ಗಂಗಾವತಿ, ಮಾನ್ವಿ, ಕಾರಟಗಿ ಸಿಂಧನೂರು ಭಾಗದ ಸುಮಾರು ನಾಲ್ಕು‌ ಲಕ್ಷಕ್ಕೂ ಭೂಮಿಗೆ ಎಡದಂಡೆ ಕಾಲುವೆಯಿಂದ‌ ನೀರಾವರಿ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next