Advertisement

ದಿಲ್ಲಿ-ತಿರುವನಂತಪುರ ಕೇರಳ ಎಕ್ಸ್‌ಪ್ರೆಸ್‌ ರೈಲು ಬೋಗಿಯಲ್ಲಿ ಬಿರುಕು

06:00 PM May 05, 2018 | udayavani editorial |

ಕೊಚ್ಚಿ : ತಿರುವನಂತಪುರಕ್ಕೆ ಹೋಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನು ಎರ್ನಾಕುಲಂ ಜಂಕ್ಷನ್‌ನಲ್ಲಿ ತಪಾಸಣೆ ಮಾಡಿದಾಗ ಅದರ ಎಸ್‌-4 ಬೋಗಿಯಲ್ಲಿ  ಬಿರುಕು ಉಂಟಾಗಿರುವುದು ಪತ್ತೆಯಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹೊಸದಿಲ್ಲಿ – ತಿರುವನಂತಪುರ ಕೇರಳ ಎಕ್ಸ್‌ಪ್ರೆಸ್‌ ರೈಲಿನ ಎಸ್‌4 ಬೋಗಿಯಲ್ಲಿ ಬಿರುಕು ಪತ್ತೆಯಾದೊಡನೆಯೇ ಅದನ್ನು ರೈಲಿನಿಂದ ಪ್ರತ್ಯೇಕಿಸಲಾಯಿತು. ಅದರಲ್ಲಿನ ಪ್ರಯಾಣಿಕರ ತಿರುವನಂತಪುರ ಪ್ರಯಾಣಕ್ಕಾಗಿ ಬೇರೆ ಬೋಗಿಗಳಲ್ಲಿ ಅವಕಾಶ ಕಲ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next