Advertisement

ಗೋವಿನ ಹೆಸರಲ್ಲಿ ಮತ ಯಾಚಿಸುವವರು ಮೇವನ್ನೂ ಕೊಡಬೇಕು: ಕೇಜ್ರಿ

06:46 AM Jan 12, 2019 | udayavani editorial |

ಹೊಸದಿಲ್ಲಿ : ಗೋವಿನ ಹೆಸರಲ್ಲಿ ಮತ ಯಾಚಿಸುವವರು ಗೋವುಗಳಿಗೆ ಮೇವನ್ನು ಕೂಡ ಒದಗಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

Advertisement

ಬಿಜೆಪಿ ನೇತೃತ್ವದ ಎಂಸಿಡಿ ಕಳೆದ ಎರಡು ವರ್ಷಗಳಲ್ಲಿ ಗೋಶಾಲೆಗಳಿಗೆ ಬಿಡುಗಡೆ ಮಾಡಬೇಕಾಗಿದ್ದ ಹಣವನ್ನು ಬಿಡುಗಡೆ ಮಾಡಿಲ್ಲ; ಆದರೆ ದಿಲ್ಲಿ ಆಪ್‌ ಸರಕಾರ ತನ್ನ ಪಾಲಿನ ವಂತಿಗೆಯನ್ನು ನೀಡಿದೆ ಎಂದು ಕೇಜ್ರಿವಾಲ್‌ ಹೇಳಿದರು. 

ಈಶಾನ್ಯ ದಿಲ್ಲಿಯ ಬವಾನಾ ಪಟ್ಟದಲ್ಲಿ ದಿಲ್ಲಿ  ಸರಕಾರ ಮತ್ತು ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ ಜಂಟಿಯಾಗಿ ನಡೆಸುತ್ತಿರುವ ಶ್ರೀ ಕೃಷ್ಣ ಗೋಶಾಲೆಗೆ ಕೇಜ್ರಿವಾಲ್‌ ಅವರು ತನ್ನ ಸರಕಾರದ ಅಭಿವೃದ್ಧಿ ಸಚಿವ ಗೋಪಾಲ್‌ ರಾಯ್‌ ಅವರ ಜತೆಗೆ ಭೇಟಿ ನೀಡಿದಾಗ ಈ ಮಾತುಗಳನ್ನು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next