Advertisement

ಶೀರೂರು ಸ್ವಾಮೀಜಿ ಕಾರಿಗೆ ದನ ಕಳ್ಳಸಾಗಣೆಯ ಕಾರು ಢಿಕ್ಕಿ; ಪರಾರಿ

10:29 AM Feb 09, 2018 | |

ಹಿರಿಯಡಕ: ಶೀರೂರು ಶ್ರೀ ಲಕ್ಷ್ಮೀ ವರತೀರ್ಥ ಶ್ರೀ ಪಾದರ ಕಾರಿಗೆ ದನ ಸಾಗಣೆಯ ಸ್ಕಾರ್ಪಿಯೋ ವಾಹನವು ಫೆ. 7ರ ಮಧ್ಯರಾತ್ರಿ ಢಿಕ್ಕಿ ಹೊಡೆದು ಪರಾರಿಯಾಗಿದೆ.

Advertisement

ರಾತ್ರಿ 12:30ಕ್ಕೆ ಶ್ರೀಗಳ  ಚಾಲಕ ಪ್ರಸಾದ್‌ ಅವರು ಶಿರೂರು ಸ್ವಾಮೀಜಿ  ಕಾರಿನಲ್ಲಿ ಶಿರೂರು ಮಠದಿಂದ ಹಿರಿಯಡಕ ಕಡೆಗೆ ಬರುತ್ತಿರುವಾಗ ಶಿರೂರು ಮಠದ ದ್ವಾರದ ಬಳಿ ಹರಿಖಂಡಿಗೆಯಿಂದ ನಂಬರ್‌ ಪ್ಲೇಟ್‌ ಇಲ್ಲದ ಸ್ಕಾರ್ಪಿಯೋ  ಬಲಭಾಗಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಸ್ಕಾರ್ಪಿಯೋ ದನದ ಕಳ್ಳಸಾಗಾಣಿಕೆಗೆ ಬಳಸಿರುವುದಾಗಿದೆ ಎಂಬ ಚಾಲಕ ಪ್ರಸಾದ್‌ ನೀಡಿದ ದೂರಿನಂತೆ ಹಿರಿಯಡಕ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next