Advertisement

ಸಂಕಷ್ಟ ಪರಿಹಾರಕ್ಕೆ ಪಶುಪಾಲನೆ ಮುಖ್ಯ

04:20 PM May 01, 2020 | sudhir |

ದೇವನಹಳ್ಳಿ: ರೈತರು, ತಮ್ಮ ಸಂಕಷ್ಟದಲ್ಲಿ ನೆರವಿಗೆ ಬರುವುದು ಪಶುಪಾಲನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಶ್ರೀನಿವಾಸ್‌ ತಿಳಿಸಿದರು. ತಾಲೂಕಿನ ದುದ್ದನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ಸ್ಯಾನಿಟೈಸರ್‌ ಮತ್ತು ಮಾಸ್ಕ್ ವಿತರಿಸಿ ಮಾತನಾಡಿದರು. ಪಶು ಮೇವು ಹಾಕುವ ಸ್ಥಳಗಳನ್ನು ಶುಚಿ ಯಾಗಿಟ್ಟುಕೊಳ್ಳಬೇಕು.

Advertisement

ಹಾಲು ಶೇಖರಿಸುವ ಸ್ಟೀಲ್‌ ಕ್ಯಾನ್‌ ಬಿಸಿ ನೀರಿನಿಂದ ಸ್ವತ್ಛಗೊಳಿಸಬೇಕು. ತಾಲೂಕಿನ 181 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಮನೆಯಿಂದ ಬರುವಾಗಲೇ ಮಾಸ್ಕ್ ಧರಿಸಬೇಕು ಎಂದರು ಹೇಳಿದರು. ದುದ್ದನ ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ಮುನಿ ಶಾಮಪ್ಪ, ಕಾರ್ಯದರ್ಶಿ ಆನಂದ್‌, ನಿರ್ದೇಶಕ ಡಿ.ವಿ.ರಂಗಸ್ವಾಮಿ, ನಾಗರಾಜ್‌, ಡಿಆರ್‌ ಚಂದ್ರಪ್ಪ, ಡಿ.ಎಂ.ಮಂಜುನಾಥ್‌, ಡಿ.ಕೆ. ರವಿಕುಮಾರ್‌, ಮುನಿಯಮ್ಮ, ತಾಲೂಕು ಹಾಲು ಒಕ್ಕೂಟದ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಗಂಗಯ್ಯ, ವಿಸ್ತರಣಾಧಿಕಾರಿ ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next