Advertisement

ಮಂಗಳಮುಖಿಯರಿಂದ ಕೋವಿಡ್-19 ಜಾಗೃತಿ

01:11 PM Mar 30, 2020 | keerthan |

ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ಸರಕಾರ, ಸಂಘಸಂಸ್ಥೆಗಳು ಸೇರಿ ಇಡೀ ಸಮುದಾಯ ವ್ಯಾಪಕ ಜನಜಾಗೃತಿ ಮಾಡುವ ಸಂದರ್ಭದಲ್ಲಿ ನಗರದ ಮಂಗಳಮುಖಿಯರು ಸಹ ಪಾಲ್ಗೊಂಡರು.

Advertisement

ನಗರದ ಪ್ರಮುಖ ವೃತ್ತ ಮತ್ತು ಡೇಲಿ ಹಾಗೂ ವಾರದ ಸಂತೆ ಬಯಲು ಪ್ರದೇಶದಲ್ಲಿ ಮಂಗಳಮುಖಿಯರು ಕೋವಿಡ್-19 ವೈರಸ್ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಹರಡದಂತೆ ಸರಕಾರ ವಿಧಿಸಿರುವ ಕರ್ಪ್ಯೂ ವನ್ನು ಎಲ್ಲರೂ ಪಾಲಿಸಿ ಮನೆಯಲ್ಲಿರಬೇಕು. ಹೊರಗಡೆ ಬಂದರೆ ಸಾಮಾಜಿಕ ಅಂತರ ಕಾಪಾಡಿ ಅಗತ್ಯ ವಸ್ತು ಖರೀದಿಸಲು ಮನವಿ ಮಾಡಿದರು.

ಜಾಗೃತಿ ಜಾಥದಲ್ಲಿ ಮಂಗಳಮುಖಿಯರಾದ ಯಮನಮ್ಮ, ತಾರಾ, ಬೇಗಂ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next