Advertisement

ಲಸಿಕೆ ಪಡೆಯುವಂತೆ ಮನವೊಲಿಕೆಗೆ ಜಾಥಾ

12:08 PM Apr 12, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ 45 ವರ್ಷಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಬೇಕು, ಸುತ್ತಮುತ್ತಲಿನ ಜನರಲ್ಲೂ ಜಾಗೃತಿಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ ಕುಮಾರ್‌ ಸಲಹೆ ನೀಡಿದರು.

Advertisement

ನಗರದ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರಮೂರು ದಿನದ ಕೋವಿಡ್‌ ಲಸಿಕಾ ಉತ್ಸವಕ್ಕೆಚಾಲನೆ ನೀಡಿ ಮಾತನಾಡಿದ ಅವರು,ಕೋವಿಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮಬೀರುವುದಿಲ್ಲ. ಜಿಲ್ಲೆಯಲ್ಲಿ ಅಂತಹ ಪ್ರಕರಣ ಘಟಿಸಿಲ್ಲ. ಲಸಿಕೆ ಪಡೆದರೆ ಎರಡು ಮೂರುದಿನ ವಿಶ್ರಾಂತಿ ಪಡೆಯಬೇಕು, ಮೈ-ಕೈನೋವು, ಜ್ವರ ಬರಬಹುದಷ್ಟೇ. ಹಬ್ಬ ಇದೆ, ಕೆಲಸದ ನೆಪ ಹೇಳದೆ ಲಸಿಕೆ ಪಡೆದ್ರೆ ಸಮಾಜಕ್ಕೆ ಒಳಿತಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈ ಮೊದಲು 76 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಈಗ ಸಬ್‌ ಸೆಂಟರ್‌ಗಳಲ್ಲೂ ಆರಂಭವಾಗಿದೆ. ಕೆಲವುಕೇಂದ್ರಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆಕಡಿಮೆಯಾಗಿದೆ. ಅಂತಹ ಸ್ಥಳಗಳಲ್ಲಿ ಜಾಗೃತಿಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ನಿತ್ಯ 45 ಸಾವಿರ ರೂ.ದಂಡ ವಸೂಲಿ: ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ, ಕಳೆದ ವರ್ಷ ಕೋವಿಡ್ಕೇಸು ಹೆಚ್ಚಿದ್ದಾಗ, ಲಾಕ್‌ಡೌನ್‌ ವೇಳೆ ಜನರು ಬಹಳ ಮುನ್ನೆಚ್ಚರಿಕೆ ವಹಿಸುತ್ತಿದ್ದರು, ಮಾಸ್ಕ್ಧರಿಸುತ್ತಿದ್ದರು, ಸಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರು. ಈಗ ನಿರ್ಲಕ್ಷಿಸುತ್ತಿದ್ದಾರೆ.ಹೀಗಾಗಿಯೇ ಪಾಸಿಟಿವ್‌ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಂದ ಪ್ರತಿ ದಿನ 45 ರಿಂದ 47 ಸಾವಿರ ರೂ.ವರೆಗೆ ದಂಡ ವಸೂಲು ಮಾಡಲಾಗುತ್ತಿದೆ. ಹೀಗಾದ್ರೂ ಜನ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ರಾಮನಗರ ಕೋವಿಡ್‌ ಆಸ್ಪತ್ರೆ ಭರ್ತಿ!: ಈ ವೇಳೆ ಹಾಜರಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು, ರಾಮನಗರ ಕೋವಿಡ್‌ ರೆಫ‌ರಲ್‌ ಆಸ್ಪತ್ರೆಯಲ್ಲಿ 200 ಹಾಸಿಗಳು ತುಂಬಿವೆ, ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಈ ಹಿಂದಿನಒಪ್ಪಂದದಂತೆ 600 ಹಾಸಿಗೆಯನ್ನು ಜಿಲ್ಲೆಯ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಡಾ.ಪದ್ಮಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ:ಶಶಿಧರ್‌,ತಾಲೂಕು ವೈದ್ಯಾಧಿಕಾರಿ ಡಾ.ಶಶಿಕಲಾ,ರಾಮನಗರ ನಗರಸಭೆ ಆಯುಕ್ತ ನಂದಕುಮಾರ್‌, ಜಿಲ್ಲಾ ಆರೋಗ್ಯಶಿಕ್ಷಣಾಧಿಕಾರಿ ಗಂಗಾಧರ್‌ಮುಂತಾದವರು ಉಪಸ್ಥಿತರಿದ್ದರು.

ಮೆಹಬೂಬನಗರ ಸುತ್ತಮುತ್ತ ಜಾಗೃತಿ :

ಲಸಿಕೆ ಪಡೆಯದೇ ಇರುವ ಬಡಾವಣೆಗಳಲ್ಲಿ ಜಾಗೃತಿ ಜಾಥಾ, ಬಡಾವಣೆ ಸಭೆ ಹಮ್ಮಿಕೊಂಡು ಲಸಿಕೆಸುರಕ್ಷಿತ ಎಂಬುದರ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಡೀಸಿ ಡಾ.ಕೆ.ರಾಕೇಶ್‌ ಕುಮಾರ್‌ ತಿಳಿಸಿದರು. ಆಯಾ ಸಮುದಾಯದ ಮುಖಂಡರನ್ನು ಜೊತೆಗೆ ಕರೆದುಕೊಂಡು ಮನೆ, ಮನೆಗೆ ತೆರಳಿ ಕರಪತ್ರ ಕೊಟ್ಟು ಜನ ಜಾಗೃತಿ ಮೂಡಿಸುವುದಾಗಿ ಹೇಳಿದರು. ಸೋಮವಾರ ಜಿಲ್ಲಾ ಕೇಂದ್ರ ರಾಮನಗರದ ಮೆಹಬೂಬ್‌ನಗರ, ಗೆಜ್ಜಲುಗುಡ್ಡೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಅಭಿಯಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next