Advertisement

ಇಂದು ಲಸಿಕಾ ಆಂದೋಲನ

01:48 PM Sep 22, 2021 | Team Udayavani |

ಬಳ್ಳಾರಿ: ಜಿಲ್ಲೆಯ ಬಳ್ಳಾರಿ ಗ್ರಾಮೀಣ, ಸಿರಗುಪ್ಪಹಾಗೂ ಕುರುಗೋಡು ತಾಲೂಕುಗಳಲ್ಲಿಸೆ. 22ರಂದು ಬೃಹತ್‌ ಪ್ರಮಾಣದ ವಿಶೇಷಕೋವಿಡ್‌ ಲಸಿಕಾ ನೀಡಿಕೆ ಆಂದೋಲನ ನಡೆಸಲಾಗುತ್ತಿದೆ.

Advertisement

ಇದಕ್ಕಾಗಿ ಎಲ್ಲರೀತಿಯ ಸಿದ್ಧತೆಗಳನ್ನು ಈಗಾಗಲೇಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿಅವರು ತಿಳಿಸಿದ್ದಾರೆ.ಲಸಿಕಾಕರಣ ಕಡಿಮೆಪ್ರಮಾಣವಾಗಿರುವ ಹಿನ್ನೆಲೆಯಲ್ಲಿಈ ವಿಶೇಷ ಲಸಿಕಾ ಆಂದೋಲನವನ್ನು ಬಳ್ಳಾರಿಗ್ರಾಮೀಣ, ಸಿರಗುಪ್ಪ ಮತ್ತು ಕುರುಗೋಡುತಾಲೂಕುಗಳಾದ್ಯಂತ ಹಮ್ಮಿಕೊಳ್ಳಲಾಗಿದೆ.ಇದಕ್ಕಾಗಿ 410 ತಂಡಗಳನ್ನು ರಚಿಸಲಾಗಿದ್ದು,ಈ ತಂಡಗಳು ಬುಧವಾರ (ಸೆ. 22ರಂದು)ಬೆಳಗ್ಗೆ 7ರಿಂದ ಸಂಜೆಯವರೆಗೆ ವಿವಿಧೆಡೆಸ್ಥಾಪಿಸಲಾಗಿರುವ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಿವೆ ಎಂದು ಅವರು ತಿಳಿಸಿದ್ದಾರೆ.

ಲಸಿಕಾ ಕೇಂದ್ರಗಳ ಗುರುತು, ತಂಡಗಳ ನೇಮಕಮತ್ತು ಮೇಲ್ವಿಚಾರಣೆಗಾಗಿ ನೋಡಲ್‌ ಅಧಿಕಾರಿಗಳನ್ನು ನೇಮಕ ಸೇರಿದಂತೆ ಇದಕ್ಕೆ ಬೇಕಾದಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆಎಂದು ಜಿಲ್ಲಾಧಿ ಕಾರಿ ಪವನಕುಮಾರ ಮಾಲಪಾಟಿಅವರು ತಿಳಿಸಿದ್ದಾರೆ.

ಸೋಮವಾರ ಸಂಜೆ ಈ ತಾಲೂಕುಗಳತಹಶೀಲ್ದಾರ್‌ರು, ನೋಡಲ್‌ ಅ ಧಿಕಾರಿಗಳುಮತ್ತು ಇನ್ನಿತರ ಅಧಿ ಕಾರಿಗಳೊಂದಿಗೆ ವಿಡಿಯೋಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ನಂತರ ಅವರುಮಾತನಾಡಿದರು.ಬಳ್ಳಾರಿ ಗ್ರಾಮೀಣ, ಸಿರಗುಪ್ಪ, ಕುರುಗೋಡುತಾಲೂಕುಗಳಲ್ಲಿ 60 ಸಾವಿರ ಡೋಸ್‌ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.

ಕೋವಿಡ್‌ ಲಸಿಕೆ ನೀಡಿಕೆಗೆ ಸಂಬಂಧಿ ಸಿದಂತೆಹಾಕಿಕೊಂಡಿರುವ ಗುರಿ ಸಾಧಿ ಸಲು ಏನೆಲ್ಲಾಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವಸಿದ್ಧತೆಗಳನ್ನು ಮಾಡಬೇಕು ಎಂಬುದಕ್ಕೆ ಸಂಬಂಧಿಸಿದ ಸರಕಾರ ನಿರ್ದೇಶನ ನೀಡಿದ್ದು, ಅದರಂತೆಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Advertisement

ಎಲ್ಲ ತಾಲೂಕುಗಳಲ್ಲಿ ಕಂದಾಯಇಲಾಖೆ, ನಗರ ಸ್ಥಳೀಯ ಸಂಸ್ಥೆ,ತಾಪಂ, ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್‌ ಇಲಾಖೆ, ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಅ ಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆವಿವಿಧ ಇಲಾಖೆಗಳ ಅಧಿಕಾರಿಗಳುಮತ್ತು ಸಿಬ್ಬಂದಿ ಈ ಬೃಹತ್‌ ವಿಶೇಷ ಲಸಿಕಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನರುಸಹ ಮುಂದೆ ಬಂದು ಲಸಿಕೆ ಪಡೆದುಕೊಂಡುಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಜನರು,ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳಸದಸ್ಯರು, ತಾಪಂ ಮತ್ತು ಜಿಪಂ ಸದಸ್ಯರು,ಶಾಸಕರು, ಸಂಸದರು ಸೇರಿದಂತೆ ಎಲ್ಲಜನಪ್ರತಿನಿ ಧಿಗಳು ಮುಂದೆ ಬಂದು ಈ ಲಸಿಕಾಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದಭಾಗವಹಿಸಬೇಕು ಎಂದು ಮನವಿ ಮಾಡಿದರು.ತಾವು ಲಸಿಕೆ ಹಾಕಿಸಿಕೊಂಡಿರುತ್ತೀರಿ. ತಾವುಹಾಕಿಕೊಂಡರಾಯ್ತು ಅಂತ ಅಂದುಕೊಳ್ಳದೇ ತಮ್ಮಅಕ್ಕಪಕ್ಕದ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳದವರಮನವೊಲಿಸಿ ಅವರನ್ನು ಲಸಿಕಾಕೇಂದ್ರಗಳಿಗೆ ಕರೆ ತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಉಳಿದೆಡೆ ಎಂದಿನಂತೆ ಲಸಿಕಾ ನೀಡಿಕೆ ಪ್ರಕ್ರಿಯೆನಡೆಯಲಿವೆ ಎಂದು ಅವರು ತಿಳಿಸಿದರು. ಈಸಂದರ್ಭದಲ್ಲಿ ಜಿಪಂ ಸಿಇಒ ಕೆ.ಆರ್‌. ನಂದಿನಿ,ಅಪರ ಜಿಲ್ಲಾ ಧಿಕಾರಿ ಪಿ.ಎಸ್‌.ಮಂಜುನಾಥ, ಎಸಿಆಕಾಶ ಶಂಕರ್‌, ಡಿಎಚ್‌ಒ ಡಾ| ಜನಾರ್ಧನ್‌ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next