Advertisement

ಹುಣಸೂರಿನಲ್ಲಿ ಕೋವಿಡ್ ಕಟ್ಟಿಹಾಕಲು ಹೊಸ ಪ್ರಯೊಗ

12:27 PM Jun 20, 2021 | Team Udayavani |

ಹುಣಸೂರು:ಲಾಕ್ ಡೌನ್ ನಡುವೆಯೂ ತಾಲೂಕಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಸವರಾಜು .ತಾ.ಪಂ.ಇ.ಓ.ಗಿರೀಶ್ ನೇತೃತ್ವದಲ್ಲಿ ವೀಕ್ ಎಂಡ್ ಕರ್ಫ್ಯೂ ನಲ್ಲಿ ಓಡಾಡುತ್ತಿರುವವರಿಗೆ  ಕೊವಿಡ್ ಟೆಸ್ಟ್ ಮಾಡಿಸುತ್ತಿದ್ದಾರೆ.

Advertisement

ಕಳೆದ ಎರಡು ದಿನಗಳಿಂದ ತಹಸೀಲ್ದಾರ್ ಬಸವರಾಜು ರವರೇ  ಗೃಹರಕ್ಷಕದಳದ ಸಿಬ್ಬಂದಿಗಳೊಂದಿಗೆ ಪ್ರಮುಖವೃತ್ತಗಳಲ್ಲಿ 10 ಗಂಟೆಯ ನಂತರ ಓಡಾಡುವವರನ್ನು ತಡೆದು ಮನವೊಲಿಸಿ ತಪಾಸಣೆ ಮಾಡಿಸುತ್ತಿದ್ದು. ನಿತ್ಯ 300 ಕ್ಕೂ ಹೆಚ್ಚು ವಾಹನ ಸವಾರರಿಗೆ ತಪಾಸಣೆ ನಡೆಸಲಾಗುತ್ತಿದೆ.

ನಗರದ ಬಸ್ ನಿಲ್ದಾಣದ ರಸ್ತೆ. ಕಲ್ಕುಣಿಕಡ ವೃತ್ತ.ಎಂಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಹೆಚ್ಚು ಸವಾರರು ಓಡಾಡುವುದರಿಂದ ಎಲ್ಲಾ ವಾಹನ ಸವಾರರಿಗೆ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯಲ್ಲಿ ಆರೋಗ್ಯ ಇಲಾಖೆಯ ಮಹದೇವ್. ನಗರಸಭೆಯ ಮಹದೇವಸ್ವಾಮಿ.ನಗರಠಾಣೆ ಪೋಲೀಸರು .ಗೃಹರಕ್ಷಕದಳದ ಸಿಬ್ಬಂದಿಗಳು. ಆರ್ ಐ.ವಿ.ಎ.ಗಳು ಕಾರ್ಯಚರಣೆಯಲ್ಲಿ ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: ರೋಗಿಗಳಿಲ್ಲದೆ ಜಂಬೋ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next