Advertisement

ಕೋವಿಡ್ ನಿಂದ ವ್ಯಕ್ತಿ ಸಾವು: ಸರಿಯಾಗಿ ಊಟ ನೀಡದೆ ಸಾಯಿಸಿದ್ದಾರೆಂದು ಸಂಬಂಧಿಕರ ಗಲಾಟೆ

11:50 AM Jun 05, 2021 | Team Udayavani |

ಬೆಳಗಾವಿ: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಪಡೆಯುವ‌ ವಿಚಾರಕ್ಕೆ ಸಂಬಂಧಿಸಿದಂತೆ ಬಿಮ್ಸ್ ಎದುರು ಸಂಬಂಧಿಕರು ಗಲಾಟೆ ನಡೆಸಿದ ಘಟನೆ ಶನಿವಾರ ನಡೆಯಿತು.

Advertisement

ಬೆಳಗಾವಿ ಬಿಮ್ಸ್ ಆಸ್ಪತ್ರೆ ಮುಂಭಾಗ ಬಿಮ್ಸ್ ಸಿಬ್ಬಂದಿ- ಸಂಬಂಧಿಗಳ ಮಧ್ಯೆ ಗಲಾಟೆ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆದರೂ ಒಂದು ಗಂಟೆಗಳ ಕಾಲ ಆಸ್ಪತ್ರೆ ಆವರಣದಲ್ಲಿ ಹೈಡ್ರಾಮ ನಡೆದಿದೆ.

ಕಾಕತಿ ಗ್ರಾಮದ ಅಂಬೇಡ್ಕರ್ ಗಲ್ಲಿ ‌ನಿವಾಸಿ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದು, ಅಂತ್ಯಕ್ರಿಯೆ ಮಾಡಲು ಶವ ನೀಡಿ ಎಂದು ಸಂಬಂಧಿಕರು ಪಟ್ಟು ಹಿಡಿದರು.‌ ಮರಣೋತ್ತರ ಪರೀಕ್ಷೆ ನೀಡಿ ಪಾಲಿಕೆಗೆ ಒಪ್ಪಿಸುತ್ತೇವೆ ಅಲ್ಲಿಂದ ಪಡೆಯಿರಿ ಎಂದು ಸಿಬ್ಬಂದಿ ಹೇಳಿದ್ದಕ್ಕೆ ವಾಗ್ವಾದ ನಡೆದಿದೆ.

ಇದನ್ನೂ ಓದಿ:ಲಾಕ್ ಡೌನ್ ಆದ ಗ್ರಾಮಗಳಲ್ಲಿ ಜೂ.7ರಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ:ಡಿ.ಸಿ ಜಿ.ಜಗದೀಶ್

Advertisement

ವೈದ್ಯರ ನಿರ್ಲಕ್ಷ್ಯ ದಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸರಿಯಾಗಿ ಊಟ ನೀಡದೇ ವೈದ್ಯರೇ ಸಾಯಿಸಿದ್ದಾರೆಂದು ಆರೋಪಿಸಿದರು.‌ ಆಗ ಸಂಬಂಧಿಗಳ ಕಣ್ತಪ್ಪಿಸಿ ಮರಣೋತ್ತರ ಪರೀಕ್ಷೆಗೆ ಪೋಲಿಸರು ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next