Advertisement

ಲಸಿಕಾ ಕೇಂದ್ರಕ್ಕೆರಾಜಕೀಯ ನಾಯಕರ ಪ್ರವೇಶ ಸಲ್ಲ

03:36 PM Jun 02, 2021 | Team Udayavani |

ಬೆಂಗಳೂರು: ನಗರದಲ್ಲಿ ರಾಜಕೀಯನಾಯಕರು ಅವರ ಕಾರ್ಯಕರ್ತರಿಗೆಕೋವಿಡ್‌ ಲಸಿಕೆ ಕೊಡಿಸುತ್ತಿರುವ ಬಗ್ಗೆಹಾಗೂ ಕೋವಿಡ್‌ ಲಸಿಕೆ ರಾಜಕೀಯಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿನಗರದ ಯಾವುದೇ ಕೋವಿಡ್‌ ಲಸಿಕಾಕೇಂದ್ರಗಳಲ್ಲೂ ರಾಜಕೀಯ ಪಕ್ಷದ ಮುಖಂಡರು ಕುಳಿತುಕೊಂಡು ತಮ್ಮ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಒತ್ತಾಯಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‌ಗುಪ್ತ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಸಂಬಂಧ ಸುದ್ದಿಗಾರರೊಂದಿಗೆಮಂಗಳವಾರ ಮಾತನಾಡಿದ ಆಯುಕ್ತರು,ನಗರದ ಎಲ್ಲ ಪ್ರಾಥಮಿಕ ಆರೋಗ್ಯಕೆಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆಕೋವಿಡ್‌ ಲಸಿಕೆ ನೀಡಲಾಗುತ್ತಿದೆ. 18ರಿಂದ44 ವರ್ಷದೊಳಗಿನ ಮುಂಚೂಣಿಕಾರ್ಯಕರ್ತರಿಗೆ ತೆರೆದ ಸ್ಥಳ ಅಥವಾಕಾರ್ಯ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತಿದೆ.

ಆದರೆ, ಲಸಿಕಾ ಕೇಂದ್ರಗಳಲ್ಲಿ ವಿವಿಧರಾಜಕೀಯ ಪಕ್ಷಗಳ ಮುಖಂಡರುಕುಳಿತುಕೊಂಡು ತಮ್ಮ ಪಕ್ಷದಕಾರ್ಯಕರ್ತರಿಗೆ ಲಸಿಕೆ ವಿತರಣೆಮಾಡುವಂತೆ ಒತ್ತಾಯಿಸುತ್ತಿರುವ ಬಗ್ಗೆಆರೋಪಕೇಳಿಬರುತ್ತಿದ್ದು,ಎಲ್ಲಕೇಂದ್ರಗಳಲ್ಲಿಅರ್ಹರಿಗೆ ‌ಲಾನುಭವಿಗಳಿಗೆ ಮಾತ್ರ ಲಸಿಕೆನೀಡಬೇಕು ಎಂದರು.ಇನ್ನು ಪಾಲಿಕೆ ವ್ಯಾಪ್ತಿಯ ಕೊಳೆಗೇರಿನಿವಾಸಿಗಳಿಗೆ ಲಸಿಕೆ ಪಡೆಯಲು ಬಿಬಿಎಂಪಿಜಾಗೃತಿ ಮೂಡಿಸುತ್ತಿದ್ದರೂ, ಪ್ರಮಾಣದಲ್ಲಿಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ.

ಹೀಗಾಗಿ,ಕೆಲವು ಖಾಸಗಿ ಕಂಪನಿಗಳು ಮತ್ತುಸಂಸ್ಥೆಗಳು ಸಿಎಸ್‌ಆರ್‌ ಅಡಿಯಲ್ಲಿಕೊಳೆಗೇರಿ ನಿವಾಸಿಗಳಿಗೆ ಕೋವಿಡ್‌ ಲಸಿಕೆನೀಡಲು ಮುಂದಾಗುತ್ತಿದೆ. ಲಸಿಕೆಪಡೆಯಲು ಜಾಗೃತಿ ಮತ್ತು ಶಿಬಿರಏರ್ಪಡಿಸಲು ಮುಂದೆ ಬಂದಿವೆ ಎಂದುಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next