Advertisement

ಕೋವಿಡ್‌ ನಿರ್ವಹಣೆಗೆ ಕೋಟಿ ರೂ. ನೀಡಲು ಸಿದ್ಧ

05:41 PM May 28, 2021 | Team Udayavani |

ಚಾಮರಾಜನಗರ ವಿಧಾನಸಭಾಕ್ಷೇತ್ರದಲ್ಲಿ ಪ್ರಸ್ತುತ ಕೋವಿಡ್‌ಪ್ರಕರಣಗಳ ಸಂಖ್ಯೆ ಹೆಚ್ಚಿದೆ.ಈ ತುರ್ತು ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿಅವರು ಯಾವ ರೀತಿ ಇದನ್ನುನಿರ್ವಹಿಸುತ್ತಿದ್ದಾರೆ? ಈ ಸಮಸ್ಯೆಗಳಪರಿಹಾರಕ್ಕೆ ಅವರಪ್ರಯತ್ನವೇನು?ಈ ಬಗ್ಗೆಉದಯವಾಣಿಯಕಿರು ಸಂದರ್ಶನ.„

Advertisement

  ಪರಿಸ್ಥಿತಿಯನ್ನು ನಿರ್ವಹಣೆ ಮಾಡಲುನೀವೇನು ಕೆಲಸ ಮಾಡಿದ್ದೀರಿ?

ನನ್ನ ಕೆಲಸವನ್ನೂ ನಿಷ್ಠೆಯಿಂದ ಮಾಡುತ್ತಿದ್ದೇನೆ.ಪ್ರತಿ ದಿನ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಭೇಟಿ ನೀಡಿ,ವೈದ್ಯಾಧಿಕಾರಿಗಳ ಜೊತೆ ಮಾತನಾಡುತ್ತಿದ್ದೇನೆ.ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ತೆರಳಿ ಅಲ್ಲಿನಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದೇನೆ. ರಾಜ್ಯಸರ್ಕಾರದ ಸಚಿವರ ಜೊತೆ ಸಂಪರ್ಕದಲ್ಲಿದ್ದೇನೆ.ಕ್ಷೇತ್ರದ ಎಲ್ಲ ಗ್ರಾಪಂಗಳಿಗೆ ತೆರಳಿ ಸಭೆ ನಡೆಸುತ್ತಿದ್ದೇನೆ.ಈಗ 11 ಪಂಚಾಯಿತಿಗಳಲ್ಲಿ ಸಭೆ ನಡೆಸಿದ್ದೇನೆ.ಗ್ರಾಮೀಣ ಜನರು ಸೋಂಕಿನ ಲಕ್ಷಣ ಕಾಣಿಸಿಕೊಂಡತಕ್ಷಣ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ಸುಲಭ. ಉಸಿರಾಟಕ್ಕೆತೊಂದರೆಯಾದಾಗ ಆಸ್ಪತ್ರೆಗೆ ಬರುತ್ತಿದ್ದಾರೆ.„

ಕೋವಿಡ್ನಿರ್ವಹಣೆಗಾಗಿ ಶಾಸಕರನಿಧಿಯಿಂದ ಎಷ್ಟು ಹಣ ನೀಡಿದ್ದೀರಿ?

ಪ್ರಸ್ತುತ 38.60 ಲಕ್ಷ ರೂ.ಗಳನ್ನು ನೀಡಿದ್ದೇನೆ.ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿದ್ದ ಹೆರಿಗೆ ಆಸ್ಪತ್ರೆಹಾಗೂ ಡಯಾಲಿಸಿಸ್‌ ಸೆಂಟರ್‌ಅನ್ನು ಮೆಡಿಕಲ್‌ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸುವುದಕ್ಕೆ ಮೂಲಸೌಕರ್ಯ, ಆ್ಯಂಬುಲೆನ್ಸ್‌ ಖರೀದಿಗೆ ಇದನ್ನುಬಳಸಲಾಗುತ್ತಿದೆ. ಶಾಸಕರ ನಿಧಿಯಲ್ಲಿ ಇನ್ನೂ 1ಕೋಟಿ ರೂ. ಇದೆ. ಸರ್ಕಾರ ಶೇ.30ರಷ್ಟನ್ನು ಕೋವಿಡ್‌ ನಿರ್ವಹಣೆಗೆಕೊಡಬೇಕೆಂದು ಹೇಳಿದೆ.

Advertisement

ನಾನು1 ಕೋಟಿ ಹಣವನ್ನೂಕೋವಿಡ್‌ ನಿರ್ವಹಣೆಗೆನೀಡಲು ಸಿದ್ಧನಿದ್ದೇನೆ. ನನ್ನಕ್ಷೇತ್ರದಲ್ಲಿ ಕೊರೊನಾ ಕಡಿಮೆಮಾಡಬೇಕೆಂಬುದಷ್ಟೇ ನನ್ನ ಕಾಳಜಿ.ಇದಲ್ಲದೇ ಕೋವಿಡ್‌ನಿಂದ ಮೃತಪಟ್ಟಬಡ ಕುಟುಂಬಗಳಿಗೆ ನನ್ನ ಸ್ವಂತ ಹಣದಿಂದ ತಲಾ 10ಸಾವಿರ ರೂ. ನೆರವು ನೀಡುತ್ತಿದ್ದೇನೆ. ಪ್ರತಿ ಗ್ರಾಪಂಗೆ1000ದಷ್ಟು ಎನ್‌ 95 ಮಾಸ್ಕ್ ವಿತರಿಸುತ್ತಿದ್ದೇನೆ.„

ನಿಮ್ಮ ಕ್ಷೇತ್ರದಲ್ಲಿ ರೋಗಿಗಳಿಗೆ ಅಗತ್ಯಹಾಸಿಗೆ, ಆಕ್ಸಿಜನ್ಲಭ್ಯ ಇದೆಯೇ?

ನಮ್ಮ ಕ್ಷೇತ್ರದಲ್ಲಿ ಪ್ರಕರಣಗಳು ಜಾಸ್ತಿಯಿವೆ. ಜಿಲ್ಲಾಕೇಂದ್ರ ನನ್ನ ಕ್ಷೇತ್ರದ ವ್ಯಾಪ್ತಿಗೇ ಬರುತ್ತದೆ. ಜಿಲ್ಲಾಕೋವಿಡ್‌ ಆಸ್ಪತ್ರೆಯ ಎಲ್ಲ ಬೆಡ್‌ಗಳೂಭರ್ತಿಯಾಗಿವೆ. ಸದ್ಯಕ್ಕೆ ಆಕ್ಸಿಜನ್‌ ಸಮಸ್ಯೆಯಿಲ್ಲ.ಆದರೂ ಮುಂದಿನ ದಿನಗಳಲ್ಲಿ ಆಕ್ಸಿಜನ್‌ ಪೂರೈಕೆಹೆಚ್ಚು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.„

ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿಆಕ್ಸಿಜನ್ದುರಂತ ಸಂಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇತ್ರದಶಾಸಕರಿಗೂ ಇತ್ತು ಎಂಬ ಟೀಕೆಯಿದೆ?

ನಾನು ಅಂದು ಬೆಳಗ್ಗೆಯೇ ಇದರ ಬಗ್ಗೆ ಗಮನಹರಿಸಿದ್ದೇನೆ. ಮೇ 2ನೇ ತಾರೀಕು ಬೆಳಗ್ಗೆ ಡೀನ್‌ಗೆ ಕರೆಮಾಡಿ ಆಸ್ಪತ್ರೆಯಲ್ಲಿ ಏನಾದರೂ ಸಮಸ್ಯೆ ಇದೆಯೇಎಂದು ವಿಚಾರಿಸಿದೆ. ಆಕ್ಸಿಜನ್‌ ಕೊರತೆ ಇದೆ,ಜಿಲ್ಲಾಧಿಕಾರಿಯವರ ಜೊತೆ ಮಾತನಾಡಿ ಎಂದರು.

ಡೀಸಿಯವರಿಗೆ ಕರೆ ಮಾಡಿ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಿದೆ. ನಂತರ ಕೈಗಾರಿಕಾ ಸಚಿವಜಗದೀಶ ಶೆಟ್ಟರ್‌ ಅವರಿಗೆ ಕರೆ ಮಾಡಿ ಆಕ್ಸಿಜನ್‌ವ್ಯವಸ್ಥೆ ಮಾಡಿ ಎಂದೆ. ಬಳಿಕ ಮುಖ್ಯ ಕಾರ್ಯದರ್ಶಿರವಿಕುಮಾರ್‌ ಅವರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದೆ.ಆದರೂ ಪ್ರಯೋಜನವಾಗಲಿಲ್ಲ. ಅಂದು ರಾತ್ರಿಯೇದುರಂತ ನಡೆಯಿತು. 36 ಜನರು ಆಕ್ಸಿಜನ್‌ಕೊರತೆಯಿಂದ ಸಾಯಲು ರಾಜ್ಯ ಸರ್ಕಾರವೇ ನೇರಕಾರಣ.

ಗ್ರಾಮಗಳಲ್ಲಿ ಕೋವಿಡ್‌ ಸೋಂಕುಇದ್ದರೂ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ.ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?

ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಆಶಾ, ಅಂಗನವಾಡಿ ಕಾರ್ಯಕರ್ತರು, ವೈದ್ಯರು,ಪಂಚಾಯಿತಿ ಸದಸ್ಯರನ್ನೊಳಗೊಂಡ ಟಾಸ್ಕ್ಫೋರ್ಸ್‌ಸಭೆ ನಡೆಸುತ್ತಿದ್ದೇನೆ. ರೋಗ ಲಕ್ಷಣಗಳುಕಾಣಿಸಿಕೊಂಡ ತಕ್ಷಣವೇ ಟ್ರಯಾಜ್‌ ಸೆಂಟರ್‌ಗೆಕರೆತರಬೇಕೆಂದು ಸೂಚಿಸಿದ್ದೇನೆ. ಸರ್ಕಾರಪರೀಕ್ಷೆಗಳನ್ನು ಹೆಚ್ಚಿಸಬೇಕು. ಪ್ರತಿ ಹಳ್ಳಿಯಲ್ಲೂ ಟೆಸ್ಟ್‌ಗಳನ್ನು ಮಾಡಬೇಕು. ಹೋಂ ಐಸೋಲೇಷನ್‌ಮಾಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next