Advertisement

ಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಕಿಕ್ಕಿರಿದ ಜನ

06:23 PM May 27, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುತಡೆಗಟ್ಟಲು ಮತ್ತೆ ಮೇ 27 ರಿಂದ 31ರ ಬೆಳಗ್ಗೆ 6 ಗಂಟೆಯವರೆ ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ದಿನಸಿ ಸಹಿತ ಅಗತ್ಯ ವಸ್ತುಗಳನ್ನು ಜನ ಸಾಮಾಜಿಕ ಅಂತರ ಮರೆತು ಖರೀದಿಸಿದರು.

Advertisement

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ 3ದಿನಗಳ ಕಾಲಾವಾಕಾಶ ಕಲ್ಪಿಸಿತ್ತು ಈ ಮಧ್ಯೆ ಪ್ರತಿನಿತ್ಯಸಾಮಾಗ್ರಿಗಳ ಖರೀದಿಗಾಗಿ ಸಂತೆ ಮಾರುಕಟ್ಟೆ-ವಾಣಿಜ್ಯಪ್ರದೇಶಗಳಲ್ಲಿ ಹೆಚ್ಚು ಜನ ಕಂಡು ಬಂದರು.

ದಿನಸಿ-ತರಕಾರಿ ಅಂಗಡಿಗಳ ಬಳಿ ಸಾಲು: ಜನ ದಿನಸಿ,ತರಕಾರಿ ಅಂಗಡಿಗಳ ಬಳಿ ಸಾಲಾಗಿ ನಿಂತಿದ್ದರು. ವರ್ತಕರುಪೊಲೀಸರ ಭೀತಿಯಿಂದ ತಮ್ಮ ಅಂಗಡಿಗಳ ಮುಂದೆಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಿವ್ಯಾಪಾರ ಮಾಡಿಕೊಳ್ಳುವ ಪ್ರಯತ್ನ ಮಾಡಿದರು.

ಮಾಂಸಕ್ಕೆ ಬೇಡಿಕೆ: ಕೆಲವರು ಮಾಂಸ ಖರೀದಿ ಮಾಡಲುಮುಗಿಬಿದ್ದಿದ್ದರು. ಚಿಕಿನ್‌, ಮಟನ್‌ ಮತ್ತು ಮೀನುಖರೀದಿಯಲ್ಲಿ ಜನ ತೊಡಗಿದ್ದರು.

ಕಾರ್ಯಾಚರಣೆ: ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತಸಾಮಾಜಿಕ ಅಂತರ ಮರೆತು ಖರೀದಿಯಲ್ಲಿತೊಡಗಿದ್ದ ನಾಗರಿಕರನ್ನು ಗುರುತಿಸಿ ದಂಡ ವಿಧಿಸುವಕಾರ್ಯವನ್ನು ನಗರಸಭೆಯ ಅಧಿಕಾರಿಗಳು ಮತ್ತುಪೊಲೀಸರು ಮಾಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next