ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುತಡೆಗಟ್ಟಲು ಮತ್ತೆ ಮೇ 27 ರಿಂದ 31ರ ಬೆಳಗ್ಗೆ 6 ಗಂಟೆಯವರೆ ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತ ದಿನಸಿ ಸಹಿತ ಅಗತ್ಯ ವಸ್ತುಗಳನ್ನು ಜನ ಸಾಮಾಜಿಕ ಅಂತರ ಮರೆತು ಖರೀದಿಸಿದರು.
ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ 3ದಿನಗಳ ಕಾಲಾವಾಕಾಶ ಕಲ್ಪಿಸಿತ್ತು ಈ ಮಧ್ಯೆ ಪ್ರತಿನಿತ್ಯಸಾಮಾಗ್ರಿಗಳ ಖರೀದಿಗಾಗಿ ಸಂತೆ ಮಾರುಕಟ್ಟೆ-ವಾಣಿಜ್ಯಪ್ರದೇಶಗಳಲ್ಲಿ ಹೆಚ್ಚು ಜನ ಕಂಡು ಬಂದರು.
ದಿನಸಿ-ತರಕಾರಿ ಅಂಗಡಿಗಳ ಬಳಿ ಸಾಲು: ಜನ ದಿನಸಿ,ತರಕಾರಿ ಅಂಗಡಿಗಳ ಬಳಿ ಸಾಲಾಗಿ ನಿಂತಿದ್ದರು. ವರ್ತಕರುಪೊಲೀಸರ ಭೀತಿಯಿಂದ ತಮ್ಮ ಅಂಗಡಿಗಳ ಮುಂದೆಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಹಾಕಿವ್ಯಾಪಾರ ಮಾಡಿಕೊಳ್ಳುವ ಪ್ರಯತ್ನ ಮಾಡಿದರು.
ಮಾಂಸಕ್ಕೆ ಬೇಡಿಕೆ: ಕೆಲವರು ಮಾಂಸ ಖರೀದಿ ಮಾಡಲುಮುಗಿಬಿದ್ದಿದ್ದರು. ಚಿಕಿನ್, ಮಟನ್ ಮತ್ತು ಮೀನುಖರೀದಿಯಲ್ಲಿ ಜನ ತೊಡಗಿದ್ದರು.
ಕಾರ್ಯಾಚರಣೆ: ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲಾದ್ಯಂತಸಾಮಾಜಿಕ ಅಂತರ ಮರೆತು ಖರೀದಿಯಲ್ಲಿತೊಡಗಿದ್ದ ನಾಗರಿಕರನ್ನು ಗುರುತಿಸಿ ದಂಡ ವಿಧಿಸುವಕಾರ್ಯವನ್ನು ನಗರಸಭೆಯ ಅಧಿಕಾರಿಗಳು ಮತ್ತುಪೊಲೀಸರು ಮಾಡಿದರು.