Advertisement

ಕಾರ್ಯಕರ್ತರಿಗೆ ಸಿದ್ದು ಕೊರೊನಾ ಪಾಠ

07:50 PM Jul 08, 2021 | Team Udayavani |

ಮೈಸೂರು: ನನಗೆ, ನನ್ ಹೆಂಡ್ತಿಗೆ, ನನ್ ಮಗನಿಗೆಕೊರೊನಾ ಸೋಂಕು ತಗುಲಿತ್ತು. ಒಂದೇ ಆಸ್ಪತ್ರೆಯಲ್ಲಿಮೂವರು ಬೇರೆ ಬೇರೆ ವಾರ್ಡ್ನಲ್ಲಿ ಇದ್ದೆವು.
ಯಾರನ್ನು ಯಾರು ನೋಡದಂತೆ ಆಗೋದಂತ ಕೆಟ್ಟ ರೋಗಇದು.ಕೋವಿಡ್ ರೋಗ ಸರಿಯಿಲ್ಲ- ಅತ್ಯಂತಕೆಟ್ಟ ರೋಗ. ಹೆಂಡ್ತಿ, ಮಕ್ಕಳು ಸಹ ನಮ್ಮ ಜೊತೆ ಬರಲ್ಲ.ಅಷ್ಟುಕೆಟ್ಟ ರೋಗ ಈ ಕೊರೊನಾ. ಈ ರೋಗ ಹೋಗುವವರೆಗು ಸೆಲ್ಫಿ ಗಿಲ್ಫಿ ಬೇಡ. ಫೋಟೋಗಳನ್ನುತೆಗೆಸಿಕೊಳ್ಳೊದು ನಿಲ್ಲಬೇಕು. ಮೊದಲು ಎಲ್ಲರೂ ಕೊರೊನಾ ನಿಯಮ ಪಾಲಿಸಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆಹಾಕಿಸಿಕೊಳ್ಳಿ. ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಳ್ಳಿ ಎಂದುಕಾಂಗ್ರೆಸ್ಕಾರ್ಯ ಕರ್ತರಿಗೆಸಿದ್ದರಾಮಯ್ಯಕೊರೊನಾ ಪಾಠ ಹೇಳಿದರು.

Advertisement

ಒಂದೂವರೆ ವರ್ಷದಿಂದ ಸಾಂಕ್ರಾಮಿಕ ರೋಗದಿಂದಬಳಲಿದ್ದೇವೆ.ಕೊರೊನಾ ನಿರ್ಲಕ್ಷ್ಯ ಮಾಡುವಕಾಯಿಲೆಯಲ್ಲ.3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚುಪರಿಣಾಮ ಬೀರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಮೃತರ ಸಂಖ್ಯೆಯಲ್ಲೂ ರಾಜ್ಯ ಸರ್ಕಾರ ಸುಳ್ಳು ಲೆಕ್ಕಕೊಟ್ಟಿದೆ.2ನೇ ಅಲೆಯಲ್ಲಿ30 ಸಾವಿರ ಅಲ್ಲ.3.5 ಲಕ್ಷ ಜನ ನಿಧನರಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next