Advertisement

500 ಗಡಿ ದಾಟಿದ ಕೊರೊನಾ ಸಾವು

08:12 PM Jun 17, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಮೃತಪಟ್ಟವರ ಸಂಖ್ಯೆ 500ರ ಗಡಿ ದಾಟಿದೆ. ಬುಧವಾರ7 ಮಂದಿ ಸಾವನ್ನಪ್ಪಿದ್ದು, ಇದರಿಂದ ಸಾವಿನ ಸಂಖ್ಯೆ502ಕ್ಕೇರಿದೆ.

Advertisement

ಮಂಡ್ಯ, ಮಳವಳ್ಳಿ, ಕೆ.ಆರ್‌.ಪೇಟೆಹಾಗೂ ಹೊರ ಜಿಲ್ಲೆಯ ತಲಾ ಒಬ್ಬರು ಸೋಂಕಿತರು ಹಾಗೂ ಶ್ರೀರಂಗಪಟ್ಟಣದ ಇಬ್ಬರು ಸೇರಿದಂತೆ ಒಟ್ಟು 7ಮಂದಿ ಸೋಂಕಿನ ಜತೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.320 ಮಂದಿಗೆ ಸೋಂಕು ಆವರಿಸಿದೆ.

ಮಂಡ್ಯ 116,ಮದ್ದೂರು 24, ಮಳವಳ್ಳಿ 20,ಪಾಂಡವಪುರ 40, ಶ್ರೀರಂಗಪಟ್ಟಣ49, ಕೆ.ಆರ್‌.ಪೇಟೆ 51, ನಾಗಮಂಗಲ 19 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿದೆ.ಇದುವರೆಗೂ ಜಿಲ್ಲೆಯಲ್ಲಿ ಒಟ್ಟು67,964 ಪ್ರಕರಣ ದಾಖ ಲಾಗಿವೆ.ಅದರಂತೆ 243 ಮಂದಿ ಸೋಂಕಿನಿಂದಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇದುವರೆಗೂ 64,073 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,387 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 324 ಸರ್ಕಾರಿ ಆಸ್ಪತ್ರೆ, 61 ಖಾಸಗಿ ಆಸ್ಪತ್ರೆ, 1021ಮಂದಿ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ 1981ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 5,561ಮಂದಿಗೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 4058 ಆರ್‌ಟಿಪಿಸಿಆರ್‌ ಹಾಗೂ 1503 ಮಂದಿಗೆ ರ್ಯಾಪಿಡ್‌ ಪರೀಕ್ಷೆಮಾಡಿಸಿಕೊಂಡಿದ್ದರು. ಇದುವರೆಗೂ ಒಟ್ಟು 8,33,542ಮಂದಿ ಪರೀಕ್ಷೆಗೊಳಗಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next