Advertisement

499 ಮಂದಿಗೆ ಕೊರೊನಾ ಸೋಂಕು

07:47 PM Jun 17, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 499 ಮಂದಿಗೆಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ನಾಲ್ವರುಸಾವಿಗೀಡಾಗಿದ್ದಾರೆ. ಮೃತಪಟ್ಟವರಲ್ಲಿ ಚನ್ನರಾಯಪಟ್ಟಣ ತಾಲೂಕಿನ ಇಬ್ಬರು, ಹಾಸನ ಮತ್ತು ಸಕಲೇಶಪುರ ತಾಲೂಕಿನ ತಲಾಒಬ್ಬರು ಸೇರಿದ್ದಾರೆ.

Advertisement

ಅರಕಲಗೂಡು, ಅರಸೀಕೆರೆ, ಆಲೂರು,ಬೇಲೂರು ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ಮಾತ್ರಸಾವಿನ ಪ್ರಕರಣ ವರದಿಯಾಗಿಲ್ಲ.ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 97,362ಕ್ಕೆ ಏರಿದ್ದು,ಸೋಂಕಿನಿಂದ ಈವರೆಗೆ ಒಟ್ಟು 1,139 ಮಂದಿ ಮೃತಪಟ್ಟಿದ್ದಾರೆ.

ಬುಧವಾರ 689 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈಗಸಕ್ರಿಯ ಪ್ರಕರಣಗಳ ಸಂಖ್ಯೆ 6,693 ಕ್ಕೆ ಇಳಿದಿದೆ. ಬುಧವಾರಸೋಂಕು ದೃಢಪಟ್ಟಿರುವ 499 ಮಂದಿ ಪೈಕಿ ಹಾಸನ ತಾಲೂಕಿನ163 ಮಂದಿ, ಚನ್ನರಾಯಪಟ್ಟಣ 103, ಅರಸೀಕೆರೆ 54, ಅರಕಲಗೂಡು 53, ಹೊಳೆನರಸೀಪುರ 50, ಬೇಲೂರು 32, ಆಲೂರು28, ಸಕಲೇಶಪುರ ತಾಲೂಕಿನ 12 ಮಂದಿ ಹಾಗೂ ಹೊರಜಿಲ್ಲೆಯ 4 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒಡಾ.ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿಬುಧವಾರ 689 ಮಂದಿ ಗುಣ ಮುಖರಾಗಿದ್ದು, ಇದುವರೆಗೂಒಟ್ಟು 89,530 ಮಂದಿ ಗುಣಮಖ ರಾಗಿದ್ದಾರೆ. ಐಸಿಯುನಲ್ಲಿರುವ139 ಮಂದಿ ಸೇರಿ ಒಟ್ಟು 6,693 ಮಂದಿಗೆ ಚಿಕಿತ್ಸೆ ಮುಂದುವರಿದಿದೆಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next