Advertisement

150 ಮಂದಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ

08:30 PM Jun 14, 2021 | Team Udayavani |

 ಕೆಜಿಎಫ್: ಕೊರೊನಾ ಸೋಂಕಿನಿಂದ ಮೃತಪಟ್ಟ150 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡುವಮೂಲಕ ಆ್ಯಂಬುಲೆನ್ಸ್‌ ಚಾಲಕ ದಿನೇಶ್‌ ಮತ್ತುಸಂಗಡಿಗರು ಮಾನವೀಯತೆ ಮೆರೆದಿದ್ದಾರೆ.ಕೋವಿಡ್‌ ಎರಡನೇ ಅಲೆ ಭೀತಿಯನ್ನುಸೃಷ್ಟಿಸಿತ್ತು. ಕಣ್ಣ ಮುಂದೆಯೇ ನಿನ್ನೆ ಇದ್ದವರು ಇಂದು ಇಲ್ಲ ಎಂಬ ರೀತಿಯಲ್ಲಿ ಸಾವನ್ನಪ್ಪುತ್ತಿದ್ದರು.ಆಸ್ಪತ್ರೆಗೆ ಬಂದರೆ ಸಾವು ಬರುವುದು ಶತಸಿದ್ಧ ಎಂಬಭಾವನೆ ಸೋಂಕಿತರಲ್ಲಿ ಮೂಡಿತ್ತು.

Advertisement

ಕೋವಿಡ್‌ನಿಂದ ಮೃತಪಡುವವರ ಸಂಖ್ಯೆ ದಿನೇ ದಿನೆಹೆಚ್ಚುತ್ತಿತ್ತು.ಸರ್ಕಾರದ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಸಂಸ್ಕಾರ ನಡೆಸಬೇಕಿತ್ತು. ಕೋವಿಡ್‌ಕೇರ್‌ ಸೆಂಟರ್‌ನಲ್ಲಿ ಹೋಗಲು ವೈದ್ಯರು ಕೂಡಹಿಂದೇಟು ಹಾಕುತ್ತಿದ್ದರು. ನರ್ಸ್‌ಗಳಿಗೆ ಎಲ್ಲಾಆರೈಕೆಯ ಜವಾಬ್ದಾರಿ ನೀಡುತ್ತಿದ್ದರು.

ಈ ವೇಳೆಸಂದರ್ಭದಲ್ಲಿ ಕೇರ್‌ ಸೆಂಟರ್‌ನಲ್ಲಿ ಮೃತಪಟ್ಟವರನ್ನು ಶವಗಾರಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಮಾರ್ಗಸೂಚಿಯಂತೆ ಬಟ್ಟೆ ಸುತ್ತುವಜವಾಬ್ದಾರಿಯನ್ನು ದಿನೇಶ್‌ ಮತ್ತು ಸಂಗಡಿಗರುನಡೆಸುತ್ತಿದ್ದರು.ಮತ್ತೂಂದು ತಂಡ ಸಿದ್ಧ: ಇಲ್ಲಿನ ಆಸ್ಪತ್ರೆಯಲ್ಲಿದಾಖಲಾದ ಸೋಂಕಿತರಿಗೆ ರೋಗ ಉಲ½ಣಗೊಂಡಾಗ ಅವರನ್ನು ಕೋಲಾರ ಇಲ್ಲವೇ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿತ್ತು.

ಮಾರ್ಗಮಧ್ಯದಲ್ಲಿ ಮೃತಪಟ್ಟವರನ್ನು ಪುನಃವಾಪಸ್‌ ಕರೆದುಕೊಂಡು ಬರಬೇಕಿತ್ತು. ಪ್ರತಿದಿನಕೋವಿಡ್‌, ಇತರೆ ಕಾಯಿಲೆಯಿಂದ ಮೃತಪಟ್ಟವರಸಂಖ್ಯೆ 10 ಮೀರುತ್ತಿತ್ತು. ಆಗ ಹಗಲು ರಾತ್ರಿ ಎನ್ನದೆಈ ತಂಡ ಕಾರ್ಯೋನ್ಮುಖರಾಗುತ್ತಿತ್ತು. ಮತ್ತೂಂದುತಂಡ ಸ್ಮಶಾನದಲ್ಲಿಯೇ ಜೆಸಿಬಿ ಸಿದ್ಧ ಮಾಡಿಕೊಂಡು, ಸಂದೇಶ ಬಂದ ತಕ್ಷಣ ಹಳ್ಳ ತೋಡಿ,ಶವದ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುತ್ತಿತ್ತು.

ಭಯ ಎಂದೂ ಬರಲಿಲ್ಲ: ಕೆಜಿಎಫ್ ನಗರದಸಾವಿನ ಜೊತೆಗೆ ಬಂಗಾರಪೇಟೆ, ಮಾಲೂರುಮತ್ತು ರಾಜಪೇಟೆ ರೋಡ್‌ವರೆಗೂ ಸಂಚರಿಸಿ,ಕೋವಿಡ್‌ ಮೃತರ ಅಂತ್ಯಸಂಸ್ಕಾರ ಮಾಡಿದಪುಣ್ಯವನ್ನು ಈ ತಂಡ ಕಟ್ಟಿಕೊಂಡಿದೆ. ನನಗೆಕೋವಿಡ್‌ ಮೃತರನ್ನು ಸಾಗಿಸಲು ಭಯ ಎಂದೂಬರಲಿಲ್ಲ. ಜೊತೆಗೆ ನನಗೆ ಉತ್ತಮ ಜೊತೆಗಾರರುಸಿಕ್ಕಿದರು. ಅವರ ಸಹಕಾರದಿಂದ ಯಾವ ಕೋವಿಡ್‌ಮೃತರ ಕುಟುಂಬದವರಿಗೂ ತೊಂದರೆಯಾಗದಂತೆಕಾರ್ಯನಿರ್ವಹಿಸಲಾಯಿತು ಎಂದು ತಂಡದ ಪ್ರಮುಖ ದಿನೇಶ್‌ ಹೇಳುತ್ತಾರೆ.

Advertisement

ಬೆಮಲ್‌ ಸಂಸ್ಥೆ ಶವಸಾಗಿಸುವ ವಾಹನವನ್ನುನಮಗೆ ನೀಡಿತು. ಇದರಿಂದಾಗಿ ಎರಡು ಶವಗಳನ್ನುಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲುಸಾಧ್ಯವಾಯಿತು ಎಂದು ಅವರು ಹೇಳಿದರು.ಸಂಘ ಸಂಸ್ಥೆಗಳಿಂದ ಗೌರವ: ತಂಡದ ಸದಸ್ಯರಾದರಾಮಬಾಬು, ಅಪ್ಪು, ಜಯರಾಜ್‌, ನಾಗಮ್ಮ,ಜೆಸಿಬಿ ಚಾಲಕ ಪರಮೇಶ್‌ ಮತ್ತು ಮುನಿಸ್ವಾಮಿಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ ಕಾರ್ಯನಿರ್ವಹಣೆ ನಗರದ ಜನತೆಯಮೆಚ್ಚುಗೆಗೆ ಪಾತ್ರವಾಗಿದ್ದು, ಹಲವಾರು ಸಂಘಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿ ಋಣ ತೀರಿಸಿಕೊಳ್ಳುತ್ತಿದ್ದಾರೆ.

ಬಿ.ಆರ್‌.ಗೋಪಿನಾಥ್‌

Advertisement

Udayavani is now on Telegram. Click here to join our channel and stay updated with the latest news.

Next