Advertisement

ಚಿಕ್ಕಮಗಳೂರು: 15 ವಿಚಾರಣಾಧೀನ ಖೈದಿಗಳಿಗೆ ಕೋವಿಡ್

11:26 AM May 16, 2021 | Team Udayavani |

ಚಿಕ್ಕಮಗಳೂರು: ಕಾಫಿನಾಡಿನ ಜೈಲಿನ 15 ವಿಚಾರಣಾಧೀನ ಖೈದಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ಕೋವಿಡ್ ಪರೀಕ್ಷೆಯಿಂದ ದೃಡಪಟ್ಟಿದೆ.

Advertisement

ಮೂರು ದಿನದ ಹಿಂದೆ 65 ವರ್ಷದ ಕೈದಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಉಳಿದ ಖೈದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ : ಕಾಪು ಬಳಿ ಕಲ್ಲಿಗೆ ಢಿಕ್ಕಿ ಹೊಡೆದ ಟಗ್: ಅಪಾಯದಲ್ಲಿ 9 ಜನ ಸಿಬ್ಬಂದಿಗಳು

ಜೈಲಿನಲ್ಲಿದ್ದ 35 ಖೈದಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜೈಲಿನಲ್ಲಿ ಒಟ್ಟು 260 ವಿಚಾರಣಾಧೀನ ಕೈದಿಗಳಿದ್ದು ಸಾಮಾಜಿಕ ಅಂತರ ಕಾಪಾಡುವಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಕಾರಾಗೃಹ ಅಧೀಕ್ಷಕರಿಗೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next