Advertisement

ರೈಲುಗಳ ಸಂಚಾರದ ಮೇಲೆ ಮತ್ತೆ ಕೋವಿಡ್ ಕರಿನೆರಳು!

02:07 AM Apr 30, 2021 | Team Udayavani |

ಮಂಗಳೂರು: ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಸಂಚಾರಕ್ಕೂ ಹಿನ್ನಡೆಯಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಕುಸಿತವಾಗುತ್ತಿರುವುದರಿಂದ ಒಂದೊಂದೇ ವಿಶೇಷ ರೈಲುಗಳು ರದ್ದುಗಾತ್ತಿವೆ. ಈಗಾಗಲೇ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಎರಡು ವಿಶೇಷ ರೈಲುಗಳನ್ನು ರದ್ದುಪಡಿಸಲಾಗಿದ್ದು, ಎ. 29ರಿಂದ ಮಡಂಗಾವ್‌ಜಂಕ್ಷನ್‌-ಮಂಗಳೂರು ಸೆಂಟ್ರಲ್‌ ರೈಲು ಕೂಡ ರದ್ದಾಗಿದೆ.

Advertisement

ಕಳೆದ ಮಾ. 23ರಿಂದ ರದ್ದುಗೊಂಡಿದ್ದ ರೈಲುಗಳಲ್ಲಿ ಹೆಚ್ಚಿನ ರೈಲುಗಳನ್ನು ನವೆಂಬರ್‌ನಿಂದ ವಿಶೇಷ ರೈಲುಗಳಾಗಿ ಪುನರಾರಂಭಿಸಿಲಾಗಿತ್ತು. ಮಂಗಳೂರು ಸೆಂಟ್ರಲ್‌ನಿಂದ ಪ್ರಸ್ತುತ 10ಕ್ಕೂ ಹೆಚ್ಚು ವಿಶೇಷ ರೈಲುಗಳು ವಿವಿಧೆಡೆಗಳಿಗೆ ಸಂಚರಿಸುತ್ತಿವೆ.

ಮಡಂಗಾವ್‌ ರೈಲು

ಕೊಂಕಣ ರೈಲ್ವೇಯಲ್ಲಿ ಕಳೆದ ವರ್ಷ ರದ್ದಾಗಿದ್ದ ಮಡಂಗಾವ್‌ ಜಂಕ್ಷನ್‌-ಮಂಗಳೂರು ಸೆಂಟ್ರಲ್‌-ಮಡಂಗಾವ್‌ ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲು ಎ. 12ರಿಂದ ಪ್ರಾರಂಭವಾಗಿತ್ತು. ಎ. 29ರಿಂದ ಮತ್ತೆ ರದ್ದಾಗಿದೆ.

ಇದೇ ರೀತಿಯಾಗಿ ಮಂಗಳೂರು ಸೆಂಟ್ರಲ್‌-ಲೋಕಮಾನ್ಯ ತಿಲಕ್‌ ಟರ್ಮಿನಲ್‌ ವಿಶೇಷ ರೈಲು (ನಂ. 02620/02619) ಎ. 29ರಿಂದ ರದ್ದುಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗ ತಿಳಿಸಿದೆ.

Advertisement

ಇದಲ್ಲದೆ ಕೊಂಕಣ ರೈಲುಮಾರ್ಗದಲ್ಲಿ ಎರಡು ಪ್ರಮುಖ ವಿಶೇಷ ರೈಲುಗಳಾದ ನಂ. 02414/02413 ಮಡಂಗಾವ್‌ ಜಂಕ್ಷನ್‌-ಎಚ್‌. ನಿಜಾಮುದ್ದೀನ್‌ – ಮಡಂಗಾವ್‌ ಜಂಕ್ಷನ್‌- ರಾಜಧಾನಿ ಸೂಪರ್‌ಫಾಸ್ಟ್‌ ಹಾಗೂ ನಂ. 02120/02119 ಕರ್ಮಲಿ-ಮುಂಬಯಿ ಸಿಎಸ್‌ಎಂಟಿ ತೇಜಸ್‌ ಸೂಫರ್‌ಫಾಸ್ಟ್‌ ಕೂಡ ರದ್ದುಗೊಂಡಿದೆ.

ನೈಋತ್ಯ ರೈಲ್ವೇಯು ಕೆ.ಎಸ್‌.ಆರ್‌. ಬೆಂಗಳೂರು-ಚೆನ್ನೈ, ಕೊಚ್ಚುವೇಲಿ -ಬಾಣಸವಾಡಿ, ಕೆ.ಎಸ್‌.ಆರ್‌. ಬೆಂಗಳೂರು- ಕೊಯಮತ್ತೂರು, ಮೈಸೂರು- ಎಂಜಿಆರ್‌ ಚೆನ್ನೈ ಸೆಂಟ್ರಲ್‌, ಬಾಣಸವಾಡಿ-ಎರ್ನಾಕುಲಂ ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲುಗಳ ಸಂಚಾರವನ್ನು ಎ. 29ರಿಂದ ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next