Advertisement

ನವರಾತ್ರಿ ಸಂಭ್ರಮಕ್ಕೆ ಕೋವಿಡ್ ಅಡ್ಡಗಾಲು

12:49 PM Oct 17, 2020 | Suhan S |

ಧಾರವಾಡ: ನಗರದ ಪ್ರಸಿದ್ಧ ಲಕ್ಷ್ಮೀನಾರಾಯಣ ಜಾತ್ರಾ ಮಹೋತ್ಸವವು ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ನಡೆಯಲಿದೆ. ಇಲ್ಲಿಯ ರವಿವಾರ ಪೇಟೆಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವಕ್ಕೆ ಕೋವಿಡ್‌ ಕರಿಛಾಯೆಆವರಿಸಿದ್ದು, ಕೇವಲ ಸಾಂಪ್ರದಾಯಿಕ ಪೂಜೆಗೆ ಮಾತ್ರವೇ ಸೀಮಿತವಾಗಲಿದೆ. ಭಕ್ತಾದಿಗಳಿಗೆಹೊರಗಿನಿಂದ ಮಾತ್ರವೇ ದರ್ಶನಾವಕಾಶ ಕಲ್ಪಿಸಲಾಗಿದೆ.

Advertisement

ಲಕ್ಷ್ಮೀನಾರಾಯಣ ಜಾತ್ರೆ ಕೇವಲ 9 ದಿನಕ್ಕೆ ಸೀಮಿತವಲ್ಲ. ಬದಲಿಗೆ ಒಂದು ತಿಂಗಳ ಜಾತ್ರೆ. ಆದರೆ ಜಿಲ್ಲಾಡಳಿತದ ಆದೇಶದನ್ವಯ 107 ವರ್ಷದ ಇತಿಹಾಸ ಹೊಂದಿರುವ ಈ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶಇಲ್ಲ. ಕೇವಲ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ.ಕೋವಿಡ್‌ ನಿಯಂತ್ರಣ ಅನಿವಾರ್ಯ ಇರುವುದರಿಂದ ಸರ್ಕಾರದ ಆದೇಶ ಪಾಲಿಸಲಾಗುತ್ತಿದೆ ಎಂದು ದೇವಸ್ಥಾನದ ಕಮಿಟಿ ಮುಖ್ಯಸ್ಥ ಅಮರಟಿಕಾರೆ ತಿಳಿಸಿದ್ದಾರೆ.

ದೇವಾಲಯಕ್ಕೆ ಸಾಂಪ್ರದಾಯಿಕ ಶೈಲಿಯ ಅಲಂಕಾರ 9 ದಿನಕ್ಕೆ ಸೀಮಿತವಾಗಿ ಹತ್ತನೇ ದಿನದ ದಶಮಿಗೆ ಮುಗಿದರೂ ಜಾತ್ರೆಗೆ ಬಂದ ಮಾರಾಟಗಾರರು ಬರೋಬ್ಬರಿಒಂದು ತಿಂಗಳು ಠಿಕಾಣಿ ಹೂಡುವುದುವಾಡಿಕೆಯಾಗಿತ್ತು. ಪ್ರತಿದಿನ ಸಂಜೆಜಾತ್ರೆಗೆ ಲಗ್ಗೆ ಇಡುತ್ತಿದ್ದ ಮಹಿಳೆಯರುಮನೆಗೆ ಬೇಕಾಗುವ ಅಡುಗೆ, ಅಲಂಕಾರಿಕ ವಸ್ತುಗಳು, ನಾನಾ ಬಗೆಯ ಬಟ್ಟೆ, ಬ್ಯಾಗ್‌ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳನ್ನುಖರೀದಿಸುತ್ತಿದ್ದರು. ಆದರೆ ಈ ಬಾರಿಇವೆಲ್ಲವೂ ಇಲ್ಲದಾಗಿದೆ. ಪ್ರತಿವರ್ಷ ಒಂದು ತಿಂಗಳ ಕಾಲ ಜಾತ್ರೆಯಲ್ಲಿ ಅಂಗಡಿ ಹಾಕಿವ್ಯಾಪಾರ ಮಾಡುತ್ತಿದ್ದೆವು. ಆದರೆ ಈ ಬಾರಿ ಅದಕ್ಕೆ ಅವಕಾಶವಿಲ್ಲ. ವ್ಯಾಪಾರ ಹಾಳಾಗಿದ್ದು,ದಿಕ್ಕೇ ತೋಚುತ್ತಿಲ್ಲ ಎಂಬುದು ವ್ಯಾಪಾರಸ್ಥರ ಅಳಲಾಗಿದೆ.

ದೇವಿಗೆ ಪೂಜಾಸೇವೆ :

ಧಾರವಾಡ: ನಗರೇಶ್ವರ ದೇವಸ್ಥಾನದಲ್ಲಿನವರಾತ್ರಿಯ 9 ದಿನಗಳಲ್ಲಿ ಪ್ರತಿದಿನ ಬೆಳಗ್ಗೆ 9ರಿಂದ 1 ಗಂಟೆವರೆಗೆ ದೇವಿಗೆ ಪೂಜಾಸೇವೆ ಸಲ್ಲಿಸಬಹುದು. ಇದಲ್ಲದೇ ಸಂಜೆ 5ರಿಂದ 9 ಗಂಟೆವರೆಗೆ ಭಕ್ತರುದರ್ಶನ ಪಡೆಯಬಹುದು ಎಂದುಆರ್ಯ ವೈಶ್ಯ ಸಮಾಜದ ಅಧ್ಯಕ್ಷಈರಣ್ಣ ಆಕಳವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

19ರಿಂದ ಜ್ಞಾನೋತ್ಸವ :

ಹುಬ್ಬಳ್ಳಿ: ಸ್ಥಳೀಯ ವಿಜಯಾಂಜ ನೇಯ ವೇದ ಸಂಸ್ಕೃತ ವಿದ್ಯಾಲಯ ವತಿಯಿಂದ ಶ್ರೀನಿವಾಸ ಕಲ್ಯಾಣ-ದುರ್ಗಾ ಸುಳಾದಿ ಶರನ್ನವರಾತ್ರಿ ಜ್ಞಾನೋತ್ಸವವನ್ನು ಅ. 19ರಿಂದ 15ರ ವರೆಗೆ ಪ್ರತಿದಿನ ಸಂಜೆ 6:45 ಗಂಟೆಗೆ ವಿಜಯನಗರದ ಮಾರುತಿ ಗುಡಿಯಲ್ಲಿ ಆಯೋಜಿಸಲಾಗಿದೆ ಎಂದು ಡಾ| ಕಂಠಪಲ್ಲೀ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next