Advertisement

ಪತ್ರಿಕೆ ಹಂಚಿಕೆದಾರರಿಗೆ ನೆರವು ನೀಡಲು ಮನವಿ

07:49 PM May 25, 2021 | Team Udayavani |

ಬೆಂಗಳೂರು: ದಿನಪತ್ರಿಕೆ ಮುಖ್ಯ ವಿತರಕರುಮತ್ತು ಹಂಚಿಕೆದಾರರಿಗೂ ಪರಿಹಾರ ಧನಸಹಾಯ ನೀಡುವಂತೆ ಬೆಂಗಳೂರು ನಗರದಿನಪತ್ರಿಕೆ ಮಖ್ಯ ವಿತರಕರ ಹಾಗೂಹಂಚಿಕೆದಾರರ ಬಳಗ ಉಪಮುಖ್ಯಮಂತ್ರಿಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆಮನವಿ ಮಾಡಿದೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಳಗದಅಧ್ಯಕ್ಷ ಎಂ.ಪರಮೇಶ್ವರ ಅವರು ಕೊರೊನಾದಂತಹ ಸಂಕಷ್ಟದಲ್ಲೂ ದಿನ ಪತ್ರಿಕೆ ಹಂಚಿಕೆದಾರರು ಕಾರ್ಯ ನಿರ್ವಹಿಸುತ್ತಿದ್ದಾರೆ ಸರ್ಕಾರಇವರ ನೆರವಿಗೆ ಬರಬೇಕು ಎಂದಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ನಿಯಮಪಾಲನೆ ಮಾಡಿಕೊಂಡು ಓದುಗರಿಗೆ ಪತ್ರಿಕೆ ತಲುಪಿಸುವ ಕಾರ್ಯ ನಿರ್ವಹಿಸಲಾಗುತ್ತಿದೆ. ಇಲ್ಲಿಕಾರ್ಯ ನಿರ್ವಹಿಸುತ್ತಿರುವವರಲ್ಲಿ ವೃದ್ದರುಮತ್ತು ಯುವಕರು ಸಾವಿರಾರು ಸಂಖ್ಯೆಯಲ್ಲಿಇದ್ದಾರೆ. ಆ ಹಿನ್ನಲೆಯಲ್ಲಿ ಕಷ್ಟದಲ್ಲಿರುವ ಪತ್ರಿಕೆವಿತರಕರಿಗೆ ಮತ್ತು ಹಂಚಿಕೆದಾರರಿಗೆ ಸರ್ಕಾರಆರ್ಥಿಕ ನೆರವು ನೀಡಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next