Advertisement

ಹೊಟ್ಟೆನೋವಿಗೆ ಚಿಕಿತ್ಸೆ ಸಿಗದೆ ರೆಮ್‌ಡೆಸಿವಿಯರ್‌ ಓಮ್ನಿಯಲ್ಲೇ ನರಳಾಡಿದ ವ್ಯಕ್ತಿ

02:58 PM May 12, 2021 | Team Udayavani |

ಚಿಂತಾಮಣಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿ ವೈದ್ಯರ ನಿರ್ಲಕ್ಷ್ಯ ದಿಂದ ಮೂರು ಗಂಟೆಗಳ ಕಾಲ ಓಮ್ನಿಯಲ್ಲೇ ನರಳಾಢಿದ ಘಟನೆ ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ನಡೆದಿದೆ.

Advertisement

ಮಂಗಳವಾರ ಮಧ್ಯಾಹ್ನ ತಾಲೂಕಿನಸಿದ್ದಿಮಠ ಗ್ರಾಮದ ಅಹಮ್ಮದ್‌ಪಾಷಾಎಂಬವರು ಹೊಟ್ಟೆ ನೋವೆಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು.ಈ ವೇಳೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡದೆರೋಗಿಯನ್ನು ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಬರುವಂತೆ ಹೇಳಿ ದರು.

ಹೀಗಾಗಿ ಚಿಕಿತ್ಸೆ ಇಲ್ಲದೆ 3 ಗಂಟೆ ಗಳಕಾಲ ಓಮ್ನಿಯಲ್ಲೇ ನರಳಾಡಿದರು.ಸುದ್ದಿಗಾರರು ವೈದ್ಯರನ್ನು ಪ್ರಶ್ನಿಸಿದಾಗ ರೋಗಿಯನ್ನು ಆಸ್ಪತ್ರೆ ಒಳಕರೆದು ಚಿಕಿತ್ಸೆ ನೀಡಿದ್ದಾರೆ. ಇನ್ನುಯಾವುದೇ ರೋಗಿ ಬಂದರೂ ಕೋವಿಡ್‌ ಟೆಸ್ಟ್‌ ಕಡ್ಡಾಯವೆಂದು ಹಾಗೂ ಕೋವಿಡ್‌ ಟೆಸ್ಟ್‌ ನಂತರವೇ ಚಿಕಿತ್ಸೆ ನೀಡಲಾಗುವುದು ಎಂದುಹಾರಿಕೆ ಉತ್ತರ ನೀಡಿ ಜನತೆಯ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next