Advertisement

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

09:18 PM May 07, 2021 | Team Udayavani |

ದಾವಣಗೆರೆ: ಕೊರೊನಾ ಎರಡನೇ ಅಲೆ ಪ್ರಾರಂಭದನಂತರ ಬೆಂಗಳೂರು ಒಳಗೊಂಡಂತೆ ಇತರೆಭಾಗಗಳಲ್ಲಿದ್ದ 1550 ಕ್ಕೂ ಹೆಚ್ಚು ಜನ ಜಿಲ್ಲೆಯವಿವಿಧ ಗ್ರಾಮಗಳಿಗೆ ಮರಳಿದ್ದಾರೆ. ಬೆಂಗಳೂರು ಒಳಗೊಂಡಂತೆ ಇತರೆ ಭಾಗಗಳಲ್ಲಿನಜನ ವಾಪಸ್‌ ಆಗಿರುವ ಬಗ್ಗೆ ತಾಲೂಕು ಆಡಳಿತ,ಗ್ರಾಮ ಪಂಚಾಯತ್‌ಗಳು ಸಂಗ್ರಹಿಸಿರುವಮಾಹಿತಿ ಅನ್ವಯ ಈ ವರೆಗೆ 1550 ಕ್ಕೂ ಹೆಚ್ಚುಜನ ಪತ್ತೆಯಾಗಿದ್ದಾರೆ. ಇತರೆ ಭಾಗಗಳಿಂದಗ್ರಾಮೀಣ ಭಾಗಕ್ಕೆ ಬಂದವರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

Advertisement

ದಾವಣಗೆರೆ ತಾಲೂಕಿಗೆ 276, ಹೊನ್ನಾಳಿಗೆ406, ಜಗಳೂರಿಗೆ 149, ಚನ್ನಗಿರಿಗೆ 333, ಹರಿಹರತಾಲೂಕಿನ ವಿವಿಧ ಗ್ರಾಮಗಳಿಗೆ 386 ಜನರುವಾಪಾಸ್‌ ಆಗಿದ್ದಾರೆ. ದಾವಣಗೆರೆ ತಾಲೂಕಿನ ವಿವಿಧಗ್ರಾಮಗಳಿಗೆ 296 ಜನ ಹಿಂತಿರುಗಿದ್ದಾರೆ. ಕೊರೊನಾಪರೀಕ್ಷೆ ಸಂದರ್ಭದಲ್ಲಿ ತಾಲೂಕಿನ ಬೇತೂರುಗ್ರಾಮದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.ಸರ್ಕಾರದ ಮಾರ್ಗಸೂಚಿ ಅನ್ವಯ ಹೋಂಐಸೋಲೇಷನ್‌ಗೆ ಒಳಪಡಿಸಿ ನಿಗಾ ವಹಿಸಲಾಗಿದೆ.

ಹರಿಹರ ತಾಲೂಕಿನ ಬೆಳ್ಳೊಡಿ ಗ್ರಾಮಕ್ಕೆ40, ಭಾನುವಳ್ಳಿಗೆ 30, ದೇವರಬೆಳಕೆರೆಗೆ 40,ಹೊಳೆಸಿರಿಗೆರೆಗೆ 37, ಕೆ. ಬೇವಿನಹಳ್ಳಿಗೆ 14,ಉಕ್ಕಡಗಾತ್ರಿಗೆ 5, ಬಿಳಸನೂರಿಗೆ 27, ನಂದಿಗುಡಿಗೆ12, ಮಲೇಬೆನ್ನೂರುಗೆ 58, ಹರ್ಲಾಪುರಕ್ಕೆ 70,ಬೆಂಕಿನಗರಕ್ಕೆ 53 ಜನ ಹಿಂತಿರುಗಿದ್ದಾರೆ. ಕೋವಿಡ್‌ಪರೀಕ್ಷೆಯಲ್ಲಿ ಮಲೇಬೆನ್ನೂರುನಲ್ಲಿ ಮೂವರು,ಹರ್ಲಾಪುರ ಮತ್ತು ಬೆಳ್ಳೊಡಿಯಲ್ಲಿ ತಲಾ ಒಬ್ಬರಲ್ಲಿಸೋಂಕು ಇರುವುದು ದೃಢಪಟ್ಟಿದೆ.ಹೊನ್ನಾಳಿ ತಾಲೂಕಿಗೆ ವಿವಿಧ ಭಾಗಗಳಿಂದ406 ಜನ ಬಂದಿದ್ದಾರೆ.

ಅವರಲ್ಲಿ ಬೆಂಗಳೂರಿನಿಂದಬಂದವರ ಸಂಖ್ಯೆಯೇ ಹೆಚ್ಚು. 306 ಜನಬೆಂಗಳೂರಿನಿಂದ ವಿವಿಧ ಗ್ರಾಮಗಳಿಗೆಆಗಮಿಸಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ಸೋಗಿಲುಗ್ರಾಮದ 8 ಜನರಲ್ಲಿ ಸೋಂಕು ಪತ್ತೆಯಾಗಿದೆ.ಜಗಳೂರು ತಾಲೂಕಿನ ಗ್ರಾಮಗಳಿಗೆ 149 ಜನಹಿಂತಿರುಗಿದ್ದು, ಪರೀಕ್ಷೆ ನಡೆಸಿದಾಗ ಈ ವರೆಗೆಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.ಚನ್ನಗಿರಿ ತಾಲೂಕಿನ ವಿವಿಧ ಗ್ರಾಮಗಳಿಗೆ 333ಜನ ವಾಪಸ್‌ ಆಗಿದ್ದು, 6 ಮಂದಿಗೆ ಕೊರೊನಾಇರುವುದು ದೃಢಪಟ್ಟಿದೆ.  ಸೋಂಕು ಕಂಡುಬಂದವರನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರಹೋಂ ಐಸೋಲೇಷನ್‌ ಒಳಗೊಂಡಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ.

ಡಂಗುರದ ಮೂಲಕ ಪ್ರಚಾರ: ಬೆಂಗಳೂರುಒಳಗೊಂಡಂತೆ ವಿವಿಧೆಡೆಯಿಂದ ಹಳ್ಳಿಗಳಿಗೆಬಂದವರ ಬಗ್ಗೆ ಮಾಹಿತಿ ನೀಡುವಂತೆ ಬಹುತೇಕಎಲ್ಲ ಗ್ರಾಮಗಳಲ್ಲಿ ಡಂಗುರದ ಮೂಲಕ ಪ್ರಚಾರನಡೆಸಲಾಗುತ್ತಿದೆ. ಹೊರಗಡೆ ಬಂದವರು ಸಹಸ್ವಯಂ ಪ್ರೇರಣೆಯಿಂದ ಕೋವಿಡ್‌ ಪರೀಕ್ಷೆಗೆಒಳಗಾಗಬೇಕು. ಹಳ್ಳಿಗಳಿಗೆ ವಾಪಾಸ್ಸಾದ ನಂತರ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಗ್ರಾಮಗಳಲ್ಲಿನ ಕಾರ್ಯಪಡೆಯ ಮೂಲಕ ಬೇರೆಕಡೆಯಿಂದ ಬಂದಂತಹವರ ಮಾಹಿತಿ ಸಂಗ್ರಹಿಸುವಕೆಲಸವೂ ನಡೆಯುತ್ತಿದೆ.

Advertisement

ಕೋವಿಡ್‌ ಸೋಂಕು ಹೆಚ್ಚು ಇರುವ ರಾಜ್ಯ,ಜಿಲ್ಲೆಗಳಿಂದ ಊರಿಗೆ, ಓಣಿಗೆ, ಮನೆ ಪಕ್ಕಕ್ಕೆಯಾರಾದರೂ ಬಂದಿದ್ದಲ್ಲಿ, ಅಂತಹವರಲ್ಲಿರೋಗ ಲಕ್ಷಣಗಳಿರುವುದು ಕಂಡುಬಂದಲ್ಲಿಕೂಡಲೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು.ಅಂತಹವರಿಗೆ ಕೋವಿಡ್‌ ಟೆಸ್ಟ್‌ ಮಾಡಿ, ಅಗತ್ಯಚಿಕಿತ್ಸೆ ಕೊಡಲಾಗುವುದು. ಸಾರ್ವಜನಿಕರುಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಡಳಿತಸಾರ್ವಜನಿಕರಲ್ಲಿ ಮನವಿ ಮಾಡಿದೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next