Advertisement

ಮೊದಲ ಸ್ಥಾನದಿಂದ ಕೆಳಕ್ಕಿಳಿದ ರಾಜಧಾನಿ

01:36 PM Nov 04, 2020 | Suhan S |

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿತರಿಗಿಂತ ಗುಣಮು ಖರ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. ಇದರೊಂದಿಗೆ ಅತಿ ಹೆಚ್ಚು ಕೋವಿಡ್ ಪಾಸಿಟಿವ್‌ ಪ್ರಕರಣಗಳನ್ನು ಹೊಂದಿರುವ ನಗರ ಎಂಬ ಹಣೆಪಟ್ಟಿಯಿಂದ “ಬೆಂಗಳೂರು’ ಹೊರಬಂದಿದೆ.

Advertisement

ಸೆಪ್ಟೆಂಬರ್‌ ಅಂತ್ಯಕ್ಕೆ ದೇಶದ ಮಹಾನಗರಗಳಾದ ಪೂನಾ, ಮುಂಬೈ, ದೆಹಲಿ, ಚೆನ್ನೆಗಳಲ್ಲಿ ಸೋಂಕಿನ ತೀವ್ರತೆ ಇಳಿಕೆಯಾಯಿತು. ಆದರೆ,ಬೆಂಗಳೂರಿನಲ್ಲಿ ಮಾತ್ರ ದುಪ್ಪಟ್ಟಾಯಿತು. ಈ ವೇಳೆ ನಿತ್ಯ ಐದು ಸಾವಿರಕ್ಕೂ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಗುಣಮುಖರ ಸಂಖ್ಯೆ ಎರಡು ಸಾವಿರ ಆಸುಪಾಸಿನಲ್ಲಿತ್ತು. ಇದರ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ (ಪಾಸಿಟಿವ್‌ ಕೇಸ್‌) 65 ಸಾವಿರಕ್ಕೆ ಹೆಚ್ಚಳವಾದವು. ಅ. 8 ರಂದು ಮಹಾನಗರಗಳ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನಕ್ಕೇರಿತು. ಈ ಮೂಲಕ ಹೆಚ್ಚು ಸೋಂಕಿತರಿರುವ ನಗರ ಎಂಬ ಅಪಖ್ಯಾತಿಗೂ ಒಳಗಾಗಿತ್ತು.

ಆದರೆ, ನಗರದಲ್ಲಿ ಕಳೆದ ಒಂದು ವಾರದಲ್ಲಿ 12 ಸಾವಿರ ಹೊಸ ಪ್ರಕರಣಗಳು ಪತ್ತೆಯಾದರೇ, 36 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳು 22 ಸಾವಿರಕ್ಕೆ ಇಳಿಕೆ ಕಂಡಿವೆ. 36 ಸಾವಿರ ಪ್ರಕರಣಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿ, 24 ಸಾವಿರ ಪ್ರಕರಣಗಳೊಂದಿಗೆ ಪೂಣೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಮೂರನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಹೆಚ್ಚು ಪ್ರಕರಣಗಳಿರುವ ನಗರ ಎಂಬ ಹೆಸರಿಂದ ಹೊರಬಂದಿದೆ.

ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನಕ್ಕೆ ಅಭಿನಂದನೆ :

ಬೆಂಗಳೂರು: ಕೋವಿಡ್ ನಿರ್ವಹಣೆಗೆ ಅಗತ್ಯ ನೆರವುಗಳನ್ನು ನೀಡಿದ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವರು ಈ ಹಿಂದೆ ಬೆಂಗಳೂರಿನ ಬ್ರಾಡ್‌ ವೇ ರಸ್ತೆಯ ಚರಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಅಜೀಂ ಪ್ರೇಮ್‌ ಜಿ ಪ್ರತಿಷ್ಠಾನದಿಂದ ನೆರವು ಕೇಳಿದ್ದರು. ಹೀಗಾಗಿ, ಪ್ರತಿಷ್ಠಾನ ಡಾಕ್ಟರ್ ಫಾರ್‌ ಯು ಹೆಸರಿನ ತಂಡದ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಿದೆ. ಇದರೊಂದಿಗೆ ಸೋಂಕು ಪರೀಕ್ಷೆಗೆ ನೆರವಾಗುವ ಐದು ಉಪಕರಣಗಳನ್ನು ಬೆಂಗಳೂರು ಮೆಡಿಕಲ್‌ ಕಾಲೇಜು, ನಿಮ್ಹಾನ್ಸ್‌, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳಿಗೆ ನೀಡಿದೆ. 3 ಆರ್‌ಟಿಪಿಸಿಆರ್‌ ಯಂತ್ರ, 4 ಆರ್‌ ಎನ್‌ಎ ಯಂತ್ರಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜಿಗೆ ನೀಡಿದೆ. ಜತೆಗೆ ಒಟ್ಟು 4,755 ಪಲ್ಸ್‌ ಆಕ್ಸಿಮೀಟರ್‌ಗಳನ್ನು ನೀಡಿದೆ.

Advertisement

ಡಾ.ಬಾಲಾಜಿ ಪ್ರಸಾದ್‌ ಚಿಕಿತ್ಸೆಗೆ 25 ಲಕ್ಷ ರೂ. ನೆರವು :

ಬೆಂಗಳೂರು: ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ” ಕೋವಿಡ್ ವಾರಿಯರ್‌ ಹೀರೋ’ ಎಂದೇ ಹೆಸರಾಗಿದ್ದ ಮೂತ್ರಪಿಂಡತಜ್ಞ ಡಾ. ಬಾಲಾಜಿ ಪ್ರಸಾದ್‌ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ನಗರದ ಡಾ.ಬಾಲಾಜಿ ಪ್ರಸಾದ್‌ ಅವರು 100ಕ್ಕೂ ಹೆಚ್ಚು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಅವರಿಗೂ ಕೋವಿಡ್‌ ಕಾಣಿಸಿಕೊಂಡು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ. 37 ದಿನದಿಂದ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ 26 ದಿನಗಳಿಂದ ವೆಂಟಿಲೇಟರ್‌ ಅಳವಡಿಸಲಾಗಿದೆ. ಈ ನಡುವೆ ಅವರ ಶ್ವಾಸಕೋಶಕ್ಕೆ ಹಾನಿಯಾಗಿದ್ದರಿಂದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚವಾಗಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೋರಿದ್ದರು. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಸಚಿವ ಡಾ.ಕೆ.ಸುಧಾಕರ್‌ ಅವರು ನೆರವು ನೀಡಿಕೆ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಸಚಿವರ ಪ್ರಯತ್ನದ ಫ‌ಲವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next